‘ನೇಮಕಗೊಂಡ ಎಲ್ಲರನ್ನೂ ಇಂಧನ ಕುಟುಂಬಕ್ಕೆ ಸ್ವಾಗತಿಸುವೆ. ನಿರೀಕ್ಷೆಗೆ ತಕ್ಕಂತೆ, ವೃತ್ತಿ ಧರ್ಮಕ್ಕೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸುವ ನಂಬಿಕೆ ಇದೆ.ಸರ್ಕಾರಿ ನೌಕರಿಗೆ ಸೇರುವುದು ಎಂದರೆ ಉದ್ಯೋಗ ಭದ್ರತೆಗೆ ಮಾತ್ರವಲ್ಲ. ನಿಯೋಜಿತಗೊಂಡ ಕೆಲಸಕ್ಕೆ ಬದ್ಧರಾಗಿರುವುದು ಅಷ್ಟೇ ಮುಖ್ಯ. ಆಗ ಮಾತ್ರ ಬದುಕಿಗೊಂದು ಸಾರ್ಥಕತೆ ಲಭಿಸುತ್ತದೆ.ಕೆಲಸ ಪಡೆಯುವಾಗ ತೋರಿದ ಬದ್ಧತೆ, ಶ್ರದ್ಧೆಯನ್ನು ಕೊನೆಯವರೆಗೂ ಉಳಿಸಿಕೊಳ್ಳಬೇಕು. ಕಳಂಕರಹಿತ ಜೀವನವೂ ಅಗತ್ಯ ಎಂದು ಕಿವಿಮಾತು ಹೇಳಿದ್ದಾರೆ.