<p><strong>ಬೆಂಗಳೂರು:</strong> ಜೆ.ಪಿ. ನಗರ 9ನೇ ಹಂತದಲ್ಲಿರುವ ರಾಯಲ್ ಪಾರ್ಕ್ ರೆಸಿಡೆನ್ಸಿ ಬಡಾವಣೆಯ ಅರ್ಧ ಎಕರೆ ಪ್ರದೇಶದಲ್ಲಿ ನೆಟ್ಟ ಸಾವಿರದ ಮುನ್ನೂರು ಗಿಡಗಳ ‘ಮಿಯಾವಾಕಿ’ ಮಾದರಿಯ ಕಿರು ಅರಣ್ಯವನ್ನು ಭಾನುವಾರ ಲೋಕಾರ್ಪಣೆ ಮಾಡಲಾಯಿತು.</p>.<p>‘ಮಿಯಾವಾಕಿ’ ಕಿರು ಅರಣ್ಯದ ರೂವಾರಿ ಮತ್ತು ಬಡಾವಣೆಯ ನಿವಾಸಿ ಚಂದ್ರಶೇಖರ್ ಕಾಕಾಲ್ ಮಾತನಾಡಿ, ‘ರಾಯಲ್ ಪಾರ್ಕ್ ಬಡಾವಣೆಯಲ್ಲಿ ನಾಲ್ಕು ವರ್ಷಗಳಲ್ಲಿ ಸುಮಾರು 4,000 ಸಸಿಗಳನ್ನು ಮಿಯಾವಾಕಿ ಮಾದರಿ ಕಿರು ಅರಣ್ಯದಲ್ಲಿ ನೆಟ್ಟು ಪೋಷಿಸುತ್ತಾ ಬಂದಿದ್ದೇವೆ. ಆ ಗಿಡಗಳು ಈಗ 20 ಅಡಿಗಿಂತಲೂ ಹೆಚ್ಚು ಎತ್ತರ ಹಾಗೂ ಒತ್ತೊತ್ತಾಗಿ ಬೆಳೆದು ಕಿರು ಅರಣ್ಯವೇ ಆಗಿದೆ‘ ಎಂದರು.</p>.<p>‘ಬಡಾವಣೆಯಲ್ಲಿ ಇಲ್ಲಿವರೆಗೂ ಮೂರು ಮಿಯಾವಾಕಿ ಮಾದರಿಯ ಕಿರು ಅರಣ್ಯಗಳನ್ನು ಮಾಡಿದ್ದೇವೆ. ಇದು ನಾಲ್ಕನೇ ಕಿರು ಅರಣ್ಯವಾಗಿ ರೂಪುಗೊಳ್ಳುತ್ತಿದೆ’ ಎಂದು ತಿಳಿಸಿದರು.</p>.<p>ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ‘ಟ್ರೀ ಡಾಕ್ಟರ್’ ಖ್ಯಾತಿಯ ಪರಿಸರವಾದಿ ವಿಜಯ್ ನಿಶಾಂತ್, ತಲಘಟ್ಟಪುರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಉಮೇಶ್ ಅವರು ಮಿಯಾವಾಕಿಯಲ್ಲಿ ಗಿಡಗಳನ್ನು ನೆಟ್ಟರು.</p>.<p>ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿರಾಜ್ ಬಲ್ಲಾಳ್ ಸ್ವಾಗತಿಸಿದರು. ಕಾರ್ಯದರ್ಶಿ ಬಿ.ಜೆ. ಶ್ರೀಪತಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಜೆ.ಪಿ. ನಗರ 9ನೇ ಹಂತದಲ್ಲಿರುವ ರಾಯಲ್ ಪಾರ್ಕ್ ರೆಸಿಡೆನ್ಸಿ ಬಡಾವಣೆಯ ಅರ್ಧ ಎಕರೆ ಪ್ರದೇಶದಲ್ಲಿ ನೆಟ್ಟ ಸಾವಿರದ ಮುನ್ನೂರು ಗಿಡಗಳ ‘ಮಿಯಾವಾಕಿ’ ಮಾದರಿಯ ಕಿರು ಅರಣ್ಯವನ್ನು ಭಾನುವಾರ ಲೋಕಾರ್ಪಣೆ ಮಾಡಲಾಯಿತು.</p>.<p>‘ಮಿಯಾವಾಕಿ’ ಕಿರು ಅರಣ್ಯದ ರೂವಾರಿ ಮತ್ತು ಬಡಾವಣೆಯ ನಿವಾಸಿ ಚಂದ್ರಶೇಖರ್ ಕಾಕಾಲ್ ಮಾತನಾಡಿ, ‘ರಾಯಲ್ ಪಾರ್ಕ್ ಬಡಾವಣೆಯಲ್ಲಿ ನಾಲ್ಕು ವರ್ಷಗಳಲ್ಲಿ ಸುಮಾರು 4,000 ಸಸಿಗಳನ್ನು ಮಿಯಾವಾಕಿ ಮಾದರಿ ಕಿರು ಅರಣ್ಯದಲ್ಲಿ ನೆಟ್ಟು ಪೋಷಿಸುತ್ತಾ ಬಂದಿದ್ದೇವೆ. ಆ ಗಿಡಗಳು ಈಗ 20 ಅಡಿಗಿಂತಲೂ ಹೆಚ್ಚು ಎತ್ತರ ಹಾಗೂ ಒತ್ತೊತ್ತಾಗಿ ಬೆಳೆದು ಕಿರು ಅರಣ್ಯವೇ ಆಗಿದೆ‘ ಎಂದರು.</p>.<p>‘ಬಡಾವಣೆಯಲ್ಲಿ ಇಲ್ಲಿವರೆಗೂ ಮೂರು ಮಿಯಾವಾಕಿ ಮಾದರಿಯ ಕಿರು ಅರಣ್ಯಗಳನ್ನು ಮಾಡಿದ್ದೇವೆ. ಇದು ನಾಲ್ಕನೇ ಕಿರು ಅರಣ್ಯವಾಗಿ ರೂಪುಗೊಳ್ಳುತ್ತಿದೆ’ ಎಂದು ತಿಳಿಸಿದರು.</p>.<p>ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ‘ಟ್ರೀ ಡಾಕ್ಟರ್’ ಖ್ಯಾತಿಯ ಪರಿಸರವಾದಿ ವಿಜಯ್ ನಿಶಾಂತ್, ತಲಘಟ್ಟಪುರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಉಮೇಶ್ ಅವರು ಮಿಯಾವಾಕಿಯಲ್ಲಿ ಗಿಡಗಳನ್ನು ನೆಟ್ಟರು.</p>.<p>ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿರಾಜ್ ಬಲ್ಲಾಳ್ ಸ್ವಾಗತಿಸಿದರು. ಕಾರ್ಯದರ್ಶಿ ಬಿ.ಜೆ. ಶ್ರೀಪತಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>