ಕ್ಷೇತ್ರದ ವ್ಯಾಪ್ತಿಯ ಉದ್ಯಾನಗಳ ನಿರ್ವಹಣೆ ಮತ್ತು ಉದ್ಯಾನಗಳಿಗೆ ಮೀಸಲಿಟ್ಟ ಜಮೀನಿನ ವಿವರ ಕುರಿತ ಪ್ರಶ್ನೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ಉತ್ತರಿಸಿದರು. ಆಗ, ಒತ್ತುವರಿ ವಿಷಯ ಪ್ರಸ್ತಾಪಿಸಿದ ಮುನಿರತ್ನ, ‘ನನ್ನ ಕ್ಷೇತ್ರದ ವಾರ್ಡ್ ಸಂಖ್ಯೆ 72ರ ವ್ಯಾಪ್ತಿಯ ಪ್ರಮೋದ್ ಬಡಾವಣೆಯಲ್ಲಿ 2 ಎಕರೆ ಉದ್ಯಾನ ಜಮೀನನ್ನು ಕೆಲವರು ಕಬಳಿಸಿದ್ದಾರೆ. ತೆರವು ಕಾರ್ಯಾಚರಣೆಗೆ ಹೋದರೆ ಪ್ರಭಾವಿ ವ್ಯಕ್ತಿಯ ಫೋಟೊ ತೋರಿಸುತ್ತಿದ್ದಾರೆ’ ಎಂದರು.