ಪೀಣ್ಯದಾಸರಹಳ್ಳಿ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾವಂತರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದ್ದು, ಯುವಜನರಿಗೆ ವಂಚಿಸಿದೆ’ ಎಂದು ಶಾಸಕ ರಾಮಲಿಂಗಾ ರೆಡ್ಡಿ ಅರೋಪಿಸಿದರು.
ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೀತಾ ಶಿವರಾಮ್ ಅವರ ನೇತೃತ್ವದಲ್ಲಿ ಮಲ್ಲಸಂದ್ರದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಪ್ರತಿಭಾವಂತ ಯುವಜನರಿಗೆ ನಿರಾಸೆಯಾಗಿದೆ. ಮೋದಿ ನೇತೃತ್ವದ ಸರ್ಕಾರ ವಿದ್ಯಾವಂತರನ್ನು ಬೀದಿಗೆ ತಂದಿದೆ’ ಎಂದು ದೂರಿದರು.
‘ಉದ್ಯೋಗ ಮೇಳದಲ್ಲಿ 70ಕ್ಕೂ ಹೆಚ್ಚು ವಿವಿಧ ಕಂಪನಿಗಳು ಭಾಗಿ ಯಾಗಿ, ಸಂದರ್ಶನ ನಡೆಸಿದವು. ಅನೇಕ ವಿದ್ಯಾವಂತರು ಉದ್ಯೋಗ ಪಡೆದುಕೊಂಡರು’ ಎಂದು ಆಯೋಜಕಿ ಗೀತಾ ತಿಳಿಸಿದರು.
ಮುಖಂಡರಾದ ನಾಗಲಕ್ಷ್ಮಿ ಚೌಧರಿ, ಮಂಜುನಾಥ್, ಮಂಜುನಾಥ್ ನಾಗಯ್ಯ, ಜಗದೀಶ್, ಸಿದ್ದರಾಜು ಇದ್ದರು.