‘ನನಗೆ ಸ್ನೇಹಿತರಾಗಿದ್ದ ನರಸಿಂಹಸ್ವಾಮಿ ಅವರು ತನ್ನ ಪತ್ನಿಯೊಂದಿಗೆ ಮನೆಗೆ ಬಂದ್ದಿದ್ದರು. 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಖರ್ಚಿಗಾಗಿ ₹3 ಕೋಟಿ ಹಣ ಕೇಳಿದ್ದರು. ನನಗೆ ಪರಿಚಯವಿದ್ದರ ಬಳಿಯಿಂದ ಹಂತ ಹಂತವಾಗಿ ಹಣ ಹೊಂದಿಸಿ, ಅವರಿಗೆ ನೀಡಿದ್ದೆ. ಆದರೆ, ಚುನಾವಣೆಯಲ್ಲಿ ಅವರು ಸೋಲು ಕಂಡರು. ₹85 ಲಕ್ಷ ಮಾತ್ರ ವಾಪಸ್ ನೀಡಿದ್ದು, ಉಳಿದ ಹಣ ನೀಡದೆ ವಂಚಿಸಿದ್ದಾರೆ’ ಎಂದು ಸಂಗಮ್ ದೂರಿನಲ್ಲಿ ತಿಳಿಸಿದ್ದಾರೆ.