ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ, ‘ಬಹುತ್ವ ಭಾರತದೊಳಗೆ ಒಕ್ಕೂಟ ವ್ಯವಸ್ಥೆ ಇದೆ. ಏಕ ದೇಶ, ಏಕ ಸಂಸ್ಕೃತಿ, ಏಕ ಧರ್ಮ ಎನ್ನುವುದು ಸಂವಿಧಾನ ವಿರೋಧಿ ನಡೆಯಾಗಿದೆ. ಈ ನಡೆಯನ್ನು ಅನುಸರಿಸುವವರು ದೇಶದ ಸಂವಿಧಾನದ ರಕ್ಷಕರಾಗುವುದಿಲ್ಲ. ಆದ್ದರಿಂದ, ಈ ಚುನಾವಣೆಯಲ್ಲಿ ಸಂವಿಧಾನ ರಕ್ಷಿಸುವವರನ್ನು ಆಯ್ಕೆ ಮಾಡುವುದರ ಮೂಲಕ ಸಂವಿಧಾನ ವಿರೋಧಿಗಳನ್ನು ತಿರಸ್ಕರಿಸಬೇಕು’ ಎಂದು ಕರೆ ನೀಡಿದರು.