‘ಎರಡು ಪಿಸ್ತೂಲ್ ಹಾಗೂ ಜೀವಂತ ಗುಂಡುಗಳ ಸಮೇತ ಮುಂಬೈನಿಂದ ರೈಲಿನಲ್ಲಿ ಹೊರಟಿದ್ದ ಆರೋಪಿ, ಬುಧವಾರ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದಿದ್ದ. ನಂತರ, ಅಂಬೇಡ್ಕರ್ ಆಸ್ಪತ್ರೆ ಬಳಿ ಬಂದು ವಿಜಯ್ ಎಂಬಾತನಿಗಾಗಿ ಕಾಯುತ್ತಿದ್ದ. ಬ್ಯಾಗ್ ಹಿಡಿದು ನಿಂತಿದ್ದ ಈತನ ನಡೆಯಿಂದ ಅನುಮಾನಗೊಂಡ ಸಿಬ್ಬಂದಿ ವಶಕ್ಕೆ ಪಡೆದಾಗ ಕೃತ್ಯ ಬಯಲಾಗಿದೆ. ಪಿಸ್ತೂಲ್ ಖರೀದಿದಾರ ವಿಜಯ್ ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ತಿಳಿಸಿವೆ.