ದೆಹಲಿಯಲ್ಲಿ ಬಿಜೆಪಿ ಸೋತಿರಬಹುದು. ಆದರೆ ಮತ ಪ್ರಮಾಣವನ್ನು ಶೇ 32 ರಿಂದ ಶೇ 38 ಕ್ಕೆ ಹೆಚ್ಚಿಸಿಕೊಂಡಿದೆ. ಆದರೆ,70 ರಲ್ಲಿ 67 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದೆ. ಎಎಪಿ ಗೆದ್ದಿರುವುದಕ್ಕೆ ಸಂತಸ ಪಡುವ ಕಾಂಗ್ರೆಸ್ ನಾಯಕರಿಗೆ ತಮ್ಮ ಪಕ್ಷ ಧೂಳಿಪಟವಾಗಿರುವ ಬಗ್ಗೆ ಕಿಂಚಿತ್ತು ಬೇಸರವೂ ಆಗಿಲ್ಲ. ಇದು ಅವರ ದಿವಾಳಿತನಕ್ಕೆ ನಿದರ್ಶನ ಎಂದು ಹರಿಹಾಯ್ದರು.