<p><strong>ಯಲಹಂಕ: </strong>ಬೆಂಗಳೂರು ಉತ್ತರ ಭಾಗದ ಜನರಿಗೆ ಅನುಕೂಲವಾಗುವಂತೆ ಎ.ಎಂ.ಚಾರಿಟಬಲ್ ಫೌಂಡೇಷನ್ ಮೂಲಕ ‘ಕೆಎಂಎಫ್’ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟದ ವಾಹನಕ್ಕೆ ಶಾಸಕ ಕೃಷ್ಣಬೈರೇಗೌಡ ಸಹಕಾರನಗರದಲ್ಲಿ ಚಾಲನೆ ನೀಡಿದರು.</p>.<p>‘ನಂದಿನಿ ಹಾಲಿನ ಉತ್ಪನ್ನಗಳನ್ನು ಕೊಳ್ಳಲು ಗ್ರಾಹಕರು ಅಂಗಡಿಗಳಿಗೆ ತೆರಳಬೇಕಾಗಿತ್ತು. ಆದರೆ ಈಗ ಉತ್ಪನ್ನಗಳನ್ನು ಒಳಗೊಂಡ ಮಾರಾಟ ವಾಹನವು ಪ್ರಮುಖ ರಸ್ತೆಗಳು ಮತ್ತು ಜನಸಂದಣಿ ಪ್ರದೇಶಗಳಲ್ಲಿ ಸಂಚರಿಸುವುದರಿಂದ ಗ್ರಾಹಕರು ಮನೆ ಬಳಿಯೇ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ’ ಎಂದು ತಿಳಿಸಿದರು.</p>.<p>ಫೌಂಡೇಷನ್ ನಿರ್ದೇಶಕ ವಿನೋದ್ ಕುಮಾರ್, ‘ಅಪಾರ್ಟ್ಮೆಂಟ್, ಉದ್ಯಾನ, ಹೈಕೋರ್ಟ್, ಜನವಸತಿ ಪ್ರದೇಶಗಳು, ಆಸ್ಪತ್ರೆ, ಸರ್ಕಾರಿ ಕಚೇರಿಗಳು, ಬಸ್ ನಿಲ್ದಾಣ ಮತ್ತಿತರ ಕಡೆಗಳಲ್ಲಿ ಈ ವಾಹನ ಸಂಚರಿಸಲಿದೆ’ಎಂದು ತಿಳಿಸಿದರು.</p>.<p>ವಾಹನದಲ್ಲಿ ಬ್ರೆಡ್, ಆಯುರ್ವೇದಿಕ್ ಮತ್ತು ಅರಿಷಿನಮಿಶ್ರಿತ ಹಾಲು, ಐಸ್ ಕ್ರೀಂ, ವಿವಿಧ ಬಗೆಯ ಸಿಹಿ ಪದಾರ್ಥ, ತಂಪಾದ ಪಾನೀಯಗಳು, ಪನ್ನೀರ್, ಬಟರ್ ಚೀಸ್ ಸೇರಿದಂತೆ ಸಿಹಿ ಮತ್ತು ಖಾರಾ ಪೊಂಗಲ್ ಜೊತೆಗೆ ಪಾಯಸ ದೊರೆಯಲಿದೆ ಎಂದು ಮಾಹಿತಿ ನೀಡಿದರು.</p>.<p>ಕಾಂಗ್ರೆಸ್ ಮುಖಂಡರಾದ ಎಂ.ಜಯಗೋಪಾಲಗೌಡ, ಎನ್.ಎನ್.ಶ್ರೀನಿವಾಸಯ್ಯ, ಪಳನಿ ವೆಂಕಟೇಶ್, ಎಚ್.ಎ.ಶಿವಕುಮಾರ್, ಗೌರೀಶ್, ಕೃಷ್ಣ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಹಂಕ: </strong>ಬೆಂಗಳೂರು ಉತ್ತರ ಭಾಗದ ಜನರಿಗೆ ಅನುಕೂಲವಾಗುವಂತೆ ಎ.ಎಂ.ಚಾರಿಟಬಲ್ ಫೌಂಡೇಷನ್ ಮೂಲಕ ‘ಕೆಎಂಎಫ್’ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟದ ವಾಹನಕ್ಕೆ ಶಾಸಕ ಕೃಷ್ಣಬೈರೇಗೌಡ ಸಹಕಾರನಗರದಲ್ಲಿ ಚಾಲನೆ ನೀಡಿದರು.</p>.<p>‘ನಂದಿನಿ ಹಾಲಿನ ಉತ್ಪನ್ನಗಳನ್ನು ಕೊಳ್ಳಲು ಗ್ರಾಹಕರು ಅಂಗಡಿಗಳಿಗೆ ತೆರಳಬೇಕಾಗಿತ್ತು. ಆದರೆ ಈಗ ಉತ್ಪನ್ನಗಳನ್ನು ಒಳಗೊಂಡ ಮಾರಾಟ ವಾಹನವು ಪ್ರಮುಖ ರಸ್ತೆಗಳು ಮತ್ತು ಜನಸಂದಣಿ ಪ್ರದೇಶಗಳಲ್ಲಿ ಸಂಚರಿಸುವುದರಿಂದ ಗ್ರಾಹಕರು ಮನೆ ಬಳಿಯೇ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ’ ಎಂದು ತಿಳಿಸಿದರು.</p>.<p>ಫೌಂಡೇಷನ್ ನಿರ್ದೇಶಕ ವಿನೋದ್ ಕುಮಾರ್, ‘ಅಪಾರ್ಟ್ಮೆಂಟ್, ಉದ್ಯಾನ, ಹೈಕೋರ್ಟ್, ಜನವಸತಿ ಪ್ರದೇಶಗಳು, ಆಸ್ಪತ್ರೆ, ಸರ್ಕಾರಿ ಕಚೇರಿಗಳು, ಬಸ್ ನಿಲ್ದಾಣ ಮತ್ತಿತರ ಕಡೆಗಳಲ್ಲಿ ಈ ವಾಹನ ಸಂಚರಿಸಲಿದೆ’ಎಂದು ತಿಳಿಸಿದರು.</p>.<p>ವಾಹನದಲ್ಲಿ ಬ್ರೆಡ್, ಆಯುರ್ವೇದಿಕ್ ಮತ್ತು ಅರಿಷಿನಮಿಶ್ರಿತ ಹಾಲು, ಐಸ್ ಕ್ರೀಂ, ವಿವಿಧ ಬಗೆಯ ಸಿಹಿ ಪದಾರ್ಥ, ತಂಪಾದ ಪಾನೀಯಗಳು, ಪನ್ನೀರ್, ಬಟರ್ ಚೀಸ್ ಸೇರಿದಂತೆ ಸಿಹಿ ಮತ್ತು ಖಾರಾ ಪೊಂಗಲ್ ಜೊತೆಗೆ ಪಾಯಸ ದೊರೆಯಲಿದೆ ಎಂದು ಮಾಹಿತಿ ನೀಡಿದರು.</p>.<p>ಕಾಂಗ್ರೆಸ್ ಮುಖಂಡರಾದ ಎಂ.ಜಯಗೋಪಾಲಗೌಡ, ಎನ್.ಎನ್.ಶ್ರೀನಿವಾಸಯ್ಯ, ಪಳನಿ ವೆಂಕಟೇಶ್, ಎಚ್.ಎ.ಶಿವಕುಮಾರ್, ಗೌರೀಶ್, ಕೃಷ್ಣ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>