’ಕಾರ್ನಿಯಲ್’ ಅಂಧತ್ವದಿಂದ ಮಕ್ಕಳು ಮತ್ತು ಯುವಕರು ಇಡೀ ಬದುಕನ್ನು ಕತ್ತಲೆಯಲ್ಲಿ ಕಳೆಯುವ ಸಂದರ್ಭಗಳಿವೆ. ಕಸಿ ಮಾಡುವ ಮೂಲಕ ಈ ಅಂಧತ್ವವನ್ನು ನಿವಾರಿಸಬಹುದು.ಹೀಗಾಗಿ, ಶವಸಂಸ್ಕಾರದ ಸಂದರ್ಭದಲ್ಲಿ ಕಣ್ಣುಗಳನ್ನು ಸುಡುವ ಬದಲು ಅಥವಾ ಮಣ್ಣಿನಲ್ಲಿ ಹೂಳುವ ಬದಲು ದಾನ ಮಾಡಬಹುದು ಎಂದುಲಯನ್ಸ್ ಅಂತರರಾಷ್ಟ್ರೀಯ ನೇತ್ರ ಬ್ಯಾಂಕ್ನ ವೈದ್ಯಕೀಯ ನಿರ್ದೇಶಕರಾದ ಡಾ.ರೇಖಾ ಗ್ಯಾನ್ಚಂದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.