ನೆಲದಡಿಯ ಸುರಂಗ ಮಾರ್ಗವನ್ನು ಕೊರೆಯುವುದಕ್ಕಾಗಿ ಡಾ.ಬಿ.ಆರ್. ಅಂಬೇಡ್ಕರ್, ನೆಹರೂ ಮತ್ತು ಸುಭಾಷ್ಚಂದ್ರ ಬೋಸ್ ಪ್ರತಿಮೆಗಳನ್ನು ಸ್ಥಳಾಂತರ ಮಾಡಲಾಗಿತ್ತು. ಅವುಗಳಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಮಾತ್ರ ಅದೇ ಸ್ಥಳಕ್ಕೆ ತಂದಿಡಲಾಗಿತ್ತು. ನೆಹರೂ ಪ್ರತಿಮೆಯನ್ನೂ ಪುನಃ ಅಲ್ಲಿಯೇ ತಂದಿಡಬೇಕೆಂಬ ಒತ್ತಾಯ ಹಲವು ಬಾರಿ ಕೇಳಿಬಂದಿತ್ತು.