ಅಕ್ಷಯ ಪಾತ್ರಾ ಸಿದ್ಧಪಡಿಸುವ ಬಿಸಿಯೂಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಇಲ್ಲದ್ದಕ್ಕೆ ಈ ಹಿಂದೆಯೂ ಆಕ್ಷೇಪ ಕೇಳಿಬಂದಿತ್ತು. ಕಳೆದ ವರ್ಷ ಇದೇ ವಿವಾದ ಎದ್ದಿದ್ದಾಗ ಅಕ್ಷಯ ಪಾತ್ರಾವು ಈರುಳ್ಳಿ, ಬೆಳ್ಳುಳ್ಳಿ ಸೇರಿಸಲು ನಿರಾಕರಿಸಿತ್ತು. ಸರ್ಕಾರ ನೋಟಿಸ್ ನೀಡಿದ್ದಕ್ಕೆ ಪ್ರತಿಷ್ಠಾನವು ಮಣಿದಿರಲಿಲ್ಲ. ಆದರೆ ಅಪಾರ ಸಂಖ್ಯೆಯಲ್ಲಿ (1.83 ಲಕ್ಷ) ಮಕ್ಕಳಿಗೆ ಬಿಸಿಯೂಟ ಪೂರೈಸುವ ವ್ಯವಸ್ಥೆ ಬೇರೆ ಇಲ್ಲವಾದ ಕಾರಣ ಸರ್ಕಾರ ಮತ್ತೆ ಪ್ರತಿಷ್ಠಾನ ನೀಡುವ ಆಹಾರವನ್ನೇ ಒಪ್ಪಿಕೊಂಡಿತ್ತು.