<p><strong>ಬೆಂಗಳೂರು</strong>: ‘ಜಾನಪದಕ್ಕೆ ಉತ್ತರ ಕರ್ನಾಟಕವು ಸಮೃದ್ಧ ನೆಲೆಯಾಗಿದೆ’ ಎಂದು ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಅಭಿಪ್ರಾಯಪಟ್ಟರು. </p>.<p>ಕಮತಗಿಯ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ ಮತ್ತು ಕನ್ನಡ ಜಾನಪದ ಪರಿಷತ್ತಿನ ಶಾಂತಿನಗರ ವಿಧಾನಸಭಾ ಕ್ಷೇತ್ರ ಘಟಕ ಜಂಟಿಯಾಗಿ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಪ್ರಕಾಶ ಗ. ಖಾಡೆ ಅವರ ಜನಪದ ಲೇಖನಗಳನ್ನೊಳಗೊಂಡ ‘ಗ್ರಾಮ್ಯ’ ಗ್ರಂಥವನ್ನು ಜನಾರ್ಪಣೆ ಮಾಡಿ, ಮಾತನಾಡಿದರು. </p>.<p>‘ಉತ್ತರ ಕರ್ನಾಟಕ ಭಾಗದ ಖಾಡೆ ಮನೆತನದ ಜಿ.ಬಿ.ಖಾಡೆ ಮತ್ತು ಅವರ ಪುತ್ರ ಪ್ರಕಾಶ ಖಾಡೆ ಅವರು ಕಳೆದ ಐದು ದಶಕಗಳಿಂದ ಜಾನಪದ ಸಾಹಿತ್ಯ ಸಂಗ್ರಹ, ಸಂಪಾದನೆ ಮತ್ತು ಸಂಶೋಧನೆಯಲ್ಲಿ ಮಾಡಿದ ಕೆಲಸ ದಾಖಲಾರ್ಹವಾಗಿದೆ. ಬಿಡುಗಡೆಯಾಗಿರುವ ಈ ಕೃತಿಯು ಹೊಸ ತೆಲೆಮಾರಿನ ಓದುಗರಲ್ಲಿ ಜಾನಪದದ ಅರ್ಥ ತಿಳಿವಳಿಕೆಯನ್ನು ಹೆಚ್ಚಿಸುತ್ತದೆ’ ಎಂದರು.</p>.<p>ಲೇಖಕಿ ಶಾಂತಿ ವಾಸು ‘ಜಾನಪದ ಸಂಸ್ಕೃತಿಯ ತಾಯಿ ಬೇರುಗಳು ನಮ್ಮ ಪರಂಪರೆಯ ದೊಡ್ಡ ಆಸ್ತಿಯಾಗಿವೆ. ಅವುಗಳನ್ನು ಹೊಸ ದೃಷ್ಟಿಕೋನದಿಂದ ನೋಡುವ ಲೇಖನಗಳು ಖಾಡೆ ಅವರ ಕ್ಷೇತ್ರ ಕಾರ್ಯ ಮತ್ತು ಆಳವಾದ ಅಧ್ಯಯನದ ಪ್ರತೀಕ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. </p>.<p>ಸಾಹಿತಿ ಎಂ.ವಿ.ಷಡಕ್ಷರಿ ಅವರು ಕೃತಿಯ ಬಗ್ಗೆ ಮಾತನಾಡಿದರು. ಕಮತಗಿಯ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ರಮೇಶ ಕಮತಗಿ, ಪ್ರಾಧ್ಯಾಪಕ ರಾಮಲಿಂಗೇಶ್ವರ (ಸಿಸಿರಾ), ಕಾವ್ಯ ಸ್ಪಂದನದ ಪ್ರಕಾಶಕ ಭದ್ರಾವತಿ ರಾಮಾಚಾರಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಜಾನಪದಕ್ಕೆ ಉತ್ತರ ಕರ್ನಾಟಕವು ಸಮೃದ್ಧ ನೆಲೆಯಾಗಿದೆ’ ಎಂದು ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಅಭಿಪ್ರಾಯಪಟ್ಟರು. </p>.<p>ಕಮತಗಿಯ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ ಮತ್ತು ಕನ್ನಡ ಜಾನಪದ ಪರಿಷತ್ತಿನ ಶಾಂತಿನಗರ ವಿಧಾನಸಭಾ ಕ್ಷೇತ್ರ ಘಟಕ ಜಂಟಿಯಾಗಿ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಪ್ರಕಾಶ ಗ. ಖಾಡೆ ಅವರ ಜನಪದ ಲೇಖನಗಳನ್ನೊಳಗೊಂಡ ‘ಗ್ರಾಮ್ಯ’ ಗ್ರಂಥವನ್ನು ಜನಾರ್ಪಣೆ ಮಾಡಿ, ಮಾತನಾಡಿದರು. </p>.<p>‘ಉತ್ತರ ಕರ್ನಾಟಕ ಭಾಗದ ಖಾಡೆ ಮನೆತನದ ಜಿ.ಬಿ.ಖಾಡೆ ಮತ್ತು ಅವರ ಪುತ್ರ ಪ್ರಕಾಶ ಖಾಡೆ ಅವರು ಕಳೆದ ಐದು ದಶಕಗಳಿಂದ ಜಾನಪದ ಸಾಹಿತ್ಯ ಸಂಗ್ರಹ, ಸಂಪಾದನೆ ಮತ್ತು ಸಂಶೋಧನೆಯಲ್ಲಿ ಮಾಡಿದ ಕೆಲಸ ದಾಖಲಾರ್ಹವಾಗಿದೆ. ಬಿಡುಗಡೆಯಾಗಿರುವ ಈ ಕೃತಿಯು ಹೊಸ ತೆಲೆಮಾರಿನ ಓದುಗರಲ್ಲಿ ಜಾನಪದದ ಅರ್ಥ ತಿಳಿವಳಿಕೆಯನ್ನು ಹೆಚ್ಚಿಸುತ್ತದೆ’ ಎಂದರು.</p>.<p>ಲೇಖಕಿ ಶಾಂತಿ ವಾಸು ‘ಜಾನಪದ ಸಂಸ್ಕೃತಿಯ ತಾಯಿ ಬೇರುಗಳು ನಮ್ಮ ಪರಂಪರೆಯ ದೊಡ್ಡ ಆಸ್ತಿಯಾಗಿವೆ. ಅವುಗಳನ್ನು ಹೊಸ ದೃಷ್ಟಿಕೋನದಿಂದ ನೋಡುವ ಲೇಖನಗಳು ಖಾಡೆ ಅವರ ಕ್ಷೇತ್ರ ಕಾರ್ಯ ಮತ್ತು ಆಳವಾದ ಅಧ್ಯಯನದ ಪ್ರತೀಕ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. </p>.<p>ಸಾಹಿತಿ ಎಂ.ವಿ.ಷಡಕ್ಷರಿ ಅವರು ಕೃತಿಯ ಬಗ್ಗೆ ಮಾತನಾಡಿದರು. ಕಮತಗಿಯ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ರಮೇಶ ಕಮತಗಿ, ಪ್ರಾಧ್ಯಾಪಕ ರಾಮಲಿಂಗೇಶ್ವರ (ಸಿಸಿರಾ), ಕಾವ್ಯ ಸ್ಪಂದನದ ಪ್ರಕಾಶಕ ಭದ್ರಾವತಿ ರಾಮಾಚಾರಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>