‘ಕಬ್ಬನ್ ಪಾರ್ಕ್ನಲ್ಲಿ ನೂರಾರು ಬಗೆಯ ಪಕ್ಷಿ, ಅಳಿಲು, ನಾಯಿಗಳಿವೆ. ಅವುಗಳಿಗೆ ಕುಡಿಯುವ ನೀರು ಒದಗಿಸಲು ಹೈಕೋರ್ಟ್ ವಾಹನ ನಿಲುಗಡೆ ಜಾಗದಲ್ಲಿ ಮೂರು ಸಿಮೆಂಟ್ ಪಾಟ್ ಹಾಗೂ ತೆರೆದ ಗುಂಡಿ ನಿರ್ಮಿಸಲಾಗಿದೆ. ಅವುಗಳಲ್ಲಿ ನೀರು ತುಂಬಿಸುವ ಕೆಲಸವನ್ನು ತೋಟಗಾರಿಕೆ ಇಲಾಖೆ ನಿರ್ವಹಣೆ ಮಾಡುತ್ತಿತ್ತು. ಆದರೆ, ಲಾಕ್ಡೌನ್ನಿಂದ ನೀರು ತುಂಬಿಸುವವರಿಲ್ಲದೆ ಅವು ಬತ್ತಿಹೋಗಿವೆ’ ಎಂದು ಸಾಮಾಜಿಕ ಕಾರ್ಯಕರ್ತ ಟಿ.ನರಸಿಂಹ ಮೂರ್ತಿ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದರು.