‘ಬಂದೂಕು ಕಳ್ಳತನ ಬಗ್ಗೆ ದೂರು ನೀಡಲು ಅಮೃತಹಳ್ಳಿ ಠಾಣೆಗೆ ಹೋಗಿದ್ದೆ. ಎಲ್ಲ ದಾಖಲೆ ಸಮೇತ ದೂರು ನೀಡಿದ್ದೆ. ವಿಚಾರಣೆ ನೆಪದಲ್ಲಿ ಬಂದೂಕು ಪರವಾನಗಿ ಬಗೆಗೆ ವಿನಾ ಕಾರಣ ಅನುಮಾನ ವ್ಯಕ್ತಪಡಿಸಿದ್ದೇ ಅಲ್ಲದೆ ಅಸಂಬದ್ಧ ಪ್ರಶ್ನೆಗಳನ್ನು ಕೇಳಿದ್ದ ಸಿಬ್ಬಂದಿ, ದೂರು ಸ್ವೀಕರಿಸಲು ಹಿಂದೇಟು ಹಾಕಿದರು. ಮರುದಿನ ಠಾಣೆಗೆ ಹೋದಾಗ, ವಿದ್ಯುತ್ ಇಲ್ಲವೆಂದು ಸುಖಾಸುಮ್ಮನೇ ಅಲೆದಾಡಿಸಿದರು. ವೃದ್ಧನಾದ ನನಗೆ ಪೊಲೀಸರ ವರ್ತನೆಯಿಂದ ತುಂಬಾ ನೋವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.