‘ಎಟಿಎಂ ಕೇಂದ್ರಗಳ ಎದುರು ನಿಂತು, ಹಣ ಹಾಕಲು ಬಂದವರ ಬಳಿ ತುರ್ತು ಹಣ ಬೇಕಾಗಿದ್ದು ಆನ್ಲೈನ್ ಮೂಲಕ ನಿಮಗೆ ಹಣ ಕಳಿಸುವುದಾಗಿ ಮನವಿ ಮಾಡುತ್ತಿದ್ದ. ಆರೋಪಿಯ ಮಾತು ನಂಬಿ ಕೆಲವರು ಹಣ ಕೊಡುತ್ತಿದ್ದರು. ವಂಚಿಸಲೆಂದೇ ಸೃಷ್ಟಿಸಿದ್ದ ನಕಲಿ ಅಪ್ಲಿಕೇಷನ್ ಮೂಲಕ ಹಣ ಕಳುಹಿಸಿರುವ ರೀತಿ ಸಂದೇಶ ಕಳುಹಿಸಿಸುತ್ತಿದ್ದ. ತಮ್ಮ ಮೊಬೈಲ್ಗೆ ಸಂದೇಶ ಬಂದಿರುವುದನ್ನು ನೋಡಿ, ಹಣ ಬಂದಿದೆ ಎಂದು ಜನರು ನಂಬುತ್ತಿದ್ದರು. ಆದರೆ, ನೈಜವಾಗಿ ಅವರ ಖಾತೆಗೆ ದುಡ್ಡು ಜಮೆ ಆಗುತ್ತಿರಲಿಲ್ಲ. ಸಾಯಿಲ್ ಕೈಗೆ ದುಡ್ಡು ಬರುತ್ತಿದ್ದಂತೆ ಕೈಗೆ ಸಿಗದೇ ಪರಾರಿಯಾಗುತ್ತಿದ್ದ’ ಎಂದು ಪೊಲೀಸರು ಹೇಳಿದರು.