ಆಗ ಮಧ್ಯಪ್ರವೇಶಿಸಿದ, ಕಾಂಗ್ರೆಸ್ನ ಕೆ.ಆರ್. ರಮೇಶ್ ಕುಮಾರ್, ‘ಸಭಾಧ್ಯಕ್ಷರಿಗೆ ತೀರ್ಮಾನಗಳನ್ನು ತೆಗೆದುಕೊಳ್ಳುವ ಕೆಲವು ವಿವೇಚನಾಧಿಕಾರವಿದೆ. ಈ ವಿಷಯದಲ್ಲಿ ನೀವೂ (ಪಾಟೀಲರು) ಕೂಡಾ ಎಡವಿದ್ದೀರಿ. ಸಭಾಧ್ಯಕ್ಷರ ಜೊತೆ ಈ ಕುರಿತು ಮಾತುಕತೆ ನಡೆಸಿ, ಸೌಹಾರ್ದಯುತವಾಗಿ ಬಗೆಹರಿಸೋಣ’ ಎಂಬುದಾಗಿ ಸಮಾಧಾನಪಡಿಸಿದರೆಂದೂ ಹೇಳಲಾಗಿದೆ.