ಬೆಂಗಳೂರು: ನಗರದ ಮಾಗಡಿ ರಸ್ತೆಯಲ್ಲಿನ ಬಿಎಎಲ್ ಬಡಾವಣೆಯಲ್ಲಿರುವ ಪಾವನಿ ಚಾಟ್ಸ್ ಮುಂದೆ ಭಾನುವಾರ ಜನರ ಉದ್ದದ ಸರತಿ ಸಾಲು ಕಾಣುತ್ತಿತ್ತು. ಪ್ರತಿ ರಾಜ್ಯೋತ್ಸವದಂದು ಪಾವನಿ ಚಾಟ್ಸ್ ಮುಂದೆ ಈ ರೀತಿಯ ಜನ ಜಂಗುಳಿ ಸಾಮಾನ್ಯವಾಗಿರುತ್ತದೆ. ಕಾರಣ, ಕನ್ನಡ ಹಬ್ಬದ ಅಂಗವಾಗಿ ಸಾರ್ವಜನಿಕರಿಗೆ ಅಂದು ಉಚಿತವಾಗಿ ಚಾಟ್ಸ್ ವಿತರಿಸುತ್ತಾರೆ ಬಿ. ಮಂಜುನಾಥ್.