‘ಡಿ. 4ರಂದು ರಾತ್ರಿ ನಡೆದಿದ್ದ ದರೋಡೆ ಸಂಬಂಧ ಉದ್ಯಮಿ ದೂರು ನೀಡಿದ್ದರು. ದಾವಣಗೆರೆ ಜಿಲ್ಲೆಯ ಚನ್ನಗಿರಿ ಉಪ ವಲಯ ಅರಣ್ಯಾಧಿಕಾರಿ ಸುರೇಂದ್ರ, ಟ್ಯಾಟೊ ಕಲಾವಿದ ಸೂರ್ಯ, ರೌಡಿಗಳಾದ ನವಾಜ್, ಶಹಬಾಜ್, ಉಸ್ಮಾನ್, ರಾಹೀಲ್, ನಾಗರಾಜ್, ಅನಿಲ್ ಕುಮಾರ್ ಸೇರಿ 11 ಮಂದಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ತಿಳಿಸಿದರು.