‘ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಸೇತುಪತಿ ಅವರು ವಿಮಾನದ ಮೂಲಕ ಮಂಗಳವಾರ ರಾತ್ರಿ ನಗರಕ್ಕೆ ಬಂದಿದ್ದರು. ಬ್ಯಾಗೇಜ್ ಪ್ರದೇಶದಲ್ಲಿ ಸೇತುಪತಿ ಅವರನ್ನು ನೋಡಿದ್ದ ಗಾಂಧಿ, ಸೆಲ್ಫಿ ಪಡೆಯಲು ಮುಂದಾಗಿದ್ದ. ಆತ ಮದ್ಯಪಾನ ಮಾಡಿದ್ದರಿಂದ ಸೆಲ್ಫಿ ನೀಡಲು ಸೇತುಪತಿ ನಿರಾಕರಿಸಿದ್ದರು. ಹೀಗಿದ್ದರೂ ಸುಮ್ಮನಾಗದ ಆತ ಬಲವಂತದಿಂದ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ. ಆಗ ಜಾನ್ಸನ್, ಆ ವ್ಯಕ್ತಿಯನ್ನು ದೂರಕ್ಕೆ ತಳ್ಳಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.