ಬೆಂಗಳೂರು: ಗಾಂಧಿ ಜಯಂತಿ ಅಂಗವಾಗಿ ಪಿಇಎಸ್ ವಿಶ್ವವಿದ್ಯಾಲಯದ ರೋಟರಾಕ್ಟ್ ಕ್ಲಬ್ ಹಾಗೂ ರೋಟರಿ ಕ್ಲಬ್ ಬನಶಂಕರಿ ಸಹಯೋಗದಲ್ಲಿ ‘ಬೃಹತ್ ರಕ್ತದಾನ ಶಿಬಿರ’ವನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿತ್ತು.
ಶಿಬಿರವನ್ನು ರೋಟರಿ ಕ್ಲಬ್–ಆರ್ಐ 3190ನೇ ಜಿಲ್ಲಾ ಗವರ್ನರ್ಫಜಲ್ ಮಹಮೂದ್ ಉದ್ಘಾಟಿಸಿದರು.
ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರಕ್ತದಾನ ಶಿಬಿರದಲ್ಲಿ ಸುಮಾರು 250 ಯೂನಿಟ್ಗಳಷ್ಟು ರಕ್ತ ಸಂಗ್ರಹಿಸಿದರು. ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದ ದಾನಿಗಳಿಗೆಪ್ರಮಾಣಪತ್ರ ಮತ್ತು ಟಿ-ಶರ್ಟ್ ವಿತರಿಸಲಾಯಿತು.
ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಂ.ಆರ್.ದೊರೆಸ್ವಾಮಿ, ಕುಲಪತಿ ಡಾ.ಜೆ.ಸೂರ್ಯ ಪ್ರಸಾದ್, ಕುಲಸಚಿವ ಕೆ.ಎಸ್.ಶ್ರೀಧರ್, ರೋಟರಿ ಬೆಂಗಳೂರು ಬನಶಂಕರಿಯಅಧ್ಯಕ್ಷರೊಟೇರಿಯನ್ ರೋಹಿತ್ ನಾಗೇಶ್,ಕಾರ್ಯದರ್ಶಿರೊಟೇರಿಯನ್ ತಾರಾನಾಥ್ ಹಾಗೂ ಇತರರು ಭಾಗವಹಿಸಿದ್ದರು.