ಪರಿಸ್ಥಿತಿಯ ಕಾವನ್ನು ತಣಿಸುವ ಅವರ ನಿರಂತರ ಪ್ರಯತ್ನಗಳನ್ನು ಮಾಡಿದ್ದರೂ ಅವರನ್ನೂ ಹಿಂಸಾಚಾರದ ಆರೋಪಿಗಳನ್ನಾಗಿ ಮಾಡಲಾಗಿದೆ. ಇದು ಸಂಪೂರ್ಣ ಅನೈತಿಕವೂ, ಖಂಡನಾರ್ಹವೂ ಆಗಿದೆ. ಈ ಎಲ್ಲ ಘಟನೆಗಳ ಬಗ್ಗೆ ಸತ್ಯಾಂಶ ಹೊರಗೆ ತರಲು ನ್ಯಾಯಾಂಗ ತನಿಖೆ ನಡೆಸಬೇಕು ಹಾಗೂ ಅನಗತ್ಯವಾಗಿ ಬಂಧಿಸಿರುವವ ಅಮಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಪಿಎಫ್ಐ ಆಗ್ರಹಿಸಿದೆ.