ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಕಲಬುರಗಿಯ ಡಾ. ಪ್ರೀತಿ ಜಿ. ರಾಥೋಡ್, ಹಾಸನದ ಡಾ.ಆರ್.ಮಧು ಹಾಗೂ ಶಿರೂರಿನ ಡಾ.ನೀಲಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.ರಾಜ್ಯ ಸರ್ಕಾರ 2019ರ ಮಾರ್ಚ್ 8 ಹೊರಡಿಸಿರುವ ಅಧಿಸೂಚನೆ ಭಾರತೀಯ ವೈದ್ಯಕೀಯ ಮಂಡಳಿ
ಯ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ನಿಯಮಗಳು-2000ರ ಕಲಂ 9 (4)ಕ್ಕೆ ವಿರುದ್ಧವಾಗಿದೆ ಎಂಬ ಅಭಿಪ್ರಾಯದೊಂದಿಗೆ ಅಧಿಸೂಚನೆ ರದ್ದುಪಡಿಸಿ ಆದೇಶಿಸಿತು.