‘ಪರಿಸರ ದಿನಾಚಾರಣೆಯನ್ನು ಸಾಂಕೇತಿಕವಾಗಿ ಆಚರಿಸುವುದರ ಬದಲಾಗಿ, ನೆಟ್ಟ ಗಿಡಗಳನ್ನು ವರ್ಷಪೂರ್ತಿ ಪೋಷಿಸುವ ಜವಾಬ್ದಾರಿಯನ್ನು ಕೊಟ್ಟರೆ, ಮಕ್ಕಳು ಅದನ್ನು ಮನಸ್ಪೂರ್ತಿಯಾಗಿ ಮಾಡುತ್ತಾರೆ. ತಾವು ನೆಟ್ಟಿರುವ ಗಿಡ ಬೆಳೆಯುವುದನ್ನು ನೋಡಿ ಖುಷಿಪಡುತ್ತಾರೆ. ಆಗ ಪರಿಸರ ದಿನಕ್ಕೂ ಒಂದು ಅರ್ಥ ಸಿಗುತ್ತದೆ’ ಎಂದು ಮುಖ್ಯ ಶಿಕ್ಷಕ ಕೆ.ಜಿ.ಮೂರ್ತಿ ಹೇಳಿದರು.