<p><strong>ಬೆಂಗಳೂರು: </strong>ಕವಯಿತ್ರಿ ಪ್ರತಿಭಾ ನಂದಕುಮಾರ್ ಅವರು ತಮ್ಮ ಕವಿತೆಗಳ ಮೂಲಕವೇ ಸಮಾಜವ ಅಪಸವ್ಯಗಳ ಬಗ್ಗೆ ಚಾಟಿ ಬೀಸಿದರು.</p>.<p>ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಅವರು ಸ್ವರಚಿತ ಕವನ ವಾಚನ ಮಾಡಿದರು.</p>.<p>ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮೀನು ತಿಂದು ಧರ್ಮಸ್ಥಳದ ದೇವಸ್ಥಾನಕ್ಕೆ ಹೋದ ವಿಚಾರ ಸೃಷ್ಟಿಸಿದ ವಿವಾದ, ಸಚಿವರೊಬ್ಬರು ಹುಡುಗಿಯರು ಸ್ಕರ್ಟ್ ತೊಡಬಾರದು ಎಂದು ಹೇಳಿಕೆ ನೀಡಿದ್ದು ಪ್ರತಿಭಾ ಅವರ ಕವಿತೆಯ ವಿಷಯಗಳಾದವು.</p>.<p>‘ಇದು ತಿನ್ನಬಾರದ ಮೀನು, ಕಹಿಯಾಯಿತು ಜೇನು</p>.<p>ಮುಟ್ಟಬಾರದ ಮೈ, ತಟ್ಟಲಾಗದ ಕೈ</p>.<p>ಮೀನು ತಿಂದವರನ್ನು ನೋಡಿ, ಮೊಸಳೆ ತಿಂದವರ ಕೇಕೆ</p>.<p>ಬೇಕಿತ್ತಾ ನಿನಗೆ ಮಂಜುನಾಥಾ?’</p>.<p>ಎಂದು ‘ಎದ್ದೇಳು ಮಂಜುನಾಥ’ ಕವನದ ಸಾಲುಗಳ ಮೂಲಕವೇ ಪ್ರಶ್ನಿಸಿದರು.</p>.<p>‘ಕಾಮಿತಾರ್ಥ ಪ್ರದಾಯನ ಸ್ವಚ್ಛಭಾರತದಲ್ಲಿ ಮಗ್ನ</p>.<p>ಕಾಷಾಯ ವಸ್ತ್ರಧಾರಿ ಹೆಜ್ಜೆಹೆಜ್ಜೆಗೂ ನಗ್ನ</p>.<p>ಧರ್ಮರಕ್ಷಕರಂತೆ ಸ್ಖಲನವೀರರು</p>.<p>ಕೂಗುಮಾರಿಗಳು ಇವರೇ ದಂಡಪಿಂಡಗಳು’ ಎಂದು ಧಮರ್ದ ಹೆಸರಿನಲ್ಲಿ ರಾಜಕಾರಣ ಮಾಡುವವರನ್ನು ಟೀಕಿಸಿದರು.</p>.<p>ಸ್ಕರ್ಟ್ ತೊಟ್ಟರೆ ಹುಡುಗಿ</p>.<p>ಹೊರಬೇಕಾಗುತ್ತದೆ ಸಂಸ್ಕೃತಿಯ ಶಿಲುಬೆ</p>.<p>ಸಂಸತ್ತಿನಲ್ಲಿ ಗಲಭೆ</p>.<p>ಫೇಸ್ಬುಕ್ಕಿನಲ್ಲಿ ಕೆಟ್ಟ ದುರ್ನಾತದ ಹಬೆ</p>.<p>ಆದರೆ, ಹುಡುಗಿ ಸ್ಕರ್ಟು ತೊಡುತ್ತಾಳೆ</p>.<p>ನಿರ್ಭಯವಾಗಿ ಬೀದಿಯಲ್ಲಿ ಸುತ್ತುತ್ತಾಳೆ</p>.<p>ದೇವಸ್ಥಾನದೊಳಗೂ ಕಾಲಿಡುತ್ತಾಳೆ</p>.<p>ಅಂಗಳವಿಲ್ಲದ ಮನೆಯ ಕಾಣದ ಬೇಲಿಯ ದಾಟಿ</p>.<p>ಗಾಢ ಪರಿಮಳವಾಗಿ ಗಾಳಿಯಲ್ಲಿ ತೇಲಿ</p>.<p>ಊರ ತುಂಬಾ ಹರಡಿಕೊಳ್ಳುತ್ತಾಳೆ</p>.<p>ಟೀಕಾಚಾರ್ಯರು ಅವಳ ಸ್ಕರ್ಟಿನ</p>.<p>ಅಂಚಿನಲ್ಲಿ ಹೊರಳಿ ಕೊಳೆಯಾಗಿ</p>.<p>ವಾಷಿಂಗ್ಮೆಷಿನ್ನಿನಲ್ಲಿ ತೊಳೆದು ಹೋಗುತ್ತಾರೆ</p>.<p>ಗಟಾರು ಸೇರುತ್ತಾರೆ.</p>.<p>ಎಂದು ‘ಸ್ಕರ್ಟು ತೊಟ್ಟ ಹುಡುಗಿಗೆ’ ಕವನದ ಸಾಲುಗಳ ಮೂಲಕವೇ ಹುಡುಗಿಯರ ವಸ್ತ್ರದ ಬಗ್ಗೆಯೂ ತಗಾದೆ ತೆಗೆಯುವವರಿಗೆ ತಿರುಗೇಟು ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕವಯಿತ್ರಿ ಪ್ರತಿಭಾ ನಂದಕುಮಾರ್ ಅವರು ತಮ್ಮ ಕವಿತೆಗಳ ಮೂಲಕವೇ ಸಮಾಜವ ಅಪಸವ್ಯಗಳ ಬಗ್ಗೆ ಚಾಟಿ ಬೀಸಿದರು.</p>.<p>ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಅವರು ಸ್ವರಚಿತ ಕವನ ವಾಚನ ಮಾಡಿದರು.</p>.<p>ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮೀನು ತಿಂದು ಧರ್ಮಸ್ಥಳದ ದೇವಸ್ಥಾನಕ್ಕೆ ಹೋದ ವಿಚಾರ ಸೃಷ್ಟಿಸಿದ ವಿವಾದ, ಸಚಿವರೊಬ್ಬರು ಹುಡುಗಿಯರು ಸ್ಕರ್ಟ್ ತೊಡಬಾರದು ಎಂದು ಹೇಳಿಕೆ ನೀಡಿದ್ದು ಪ್ರತಿಭಾ ಅವರ ಕವಿತೆಯ ವಿಷಯಗಳಾದವು.</p>.<p>‘ಇದು ತಿನ್ನಬಾರದ ಮೀನು, ಕಹಿಯಾಯಿತು ಜೇನು</p>.<p>ಮುಟ್ಟಬಾರದ ಮೈ, ತಟ್ಟಲಾಗದ ಕೈ</p>.<p>ಮೀನು ತಿಂದವರನ್ನು ನೋಡಿ, ಮೊಸಳೆ ತಿಂದವರ ಕೇಕೆ</p>.<p>ಬೇಕಿತ್ತಾ ನಿನಗೆ ಮಂಜುನಾಥಾ?’</p>.<p>ಎಂದು ‘ಎದ್ದೇಳು ಮಂಜುನಾಥ’ ಕವನದ ಸಾಲುಗಳ ಮೂಲಕವೇ ಪ್ರಶ್ನಿಸಿದರು.</p>.<p>‘ಕಾಮಿತಾರ್ಥ ಪ್ರದಾಯನ ಸ್ವಚ್ಛಭಾರತದಲ್ಲಿ ಮಗ್ನ</p>.<p>ಕಾಷಾಯ ವಸ್ತ್ರಧಾರಿ ಹೆಜ್ಜೆಹೆಜ್ಜೆಗೂ ನಗ್ನ</p>.<p>ಧರ್ಮರಕ್ಷಕರಂತೆ ಸ್ಖಲನವೀರರು</p>.<p>ಕೂಗುಮಾರಿಗಳು ಇವರೇ ದಂಡಪಿಂಡಗಳು’ ಎಂದು ಧಮರ್ದ ಹೆಸರಿನಲ್ಲಿ ರಾಜಕಾರಣ ಮಾಡುವವರನ್ನು ಟೀಕಿಸಿದರು.</p>.<p>ಸ್ಕರ್ಟ್ ತೊಟ್ಟರೆ ಹುಡುಗಿ</p>.<p>ಹೊರಬೇಕಾಗುತ್ತದೆ ಸಂಸ್ಕೃತಿಯ ಶಿಲುಬೆ</p>.<p>ಸಂಸತ್ತಿನಲ್ಲಿ ಗಲಭೆ</p>.<p>ಫೇಸ್ಬುಕ್ಕಿನಲ್ಲಿ ಕೆಟ್ಟ ದುರ್ನಾತದ ಹಬೆ</p>.<p>ಆದರೆ, ಹುಡುಗಿ ಸ್ಕರ್ಟು ತೊಡುತ್ತಾಳೆ</p>.<p>ನಿರ್ಭಯವಾಗಿ ಬೀದಿಯಲ್ಲಿ ಸುತ್ತುತ್ತಾಳೆ</p>.<p>ದೇವಸ್ಥಾನದೊಳಗೂ ಕಾಲಿಡುತ್ತಾಳೆ</p>.<p>ಅಂಗಳವಿಲ್ಲದ ಮನೆಯ ಕಾಣದ ಬೇಲಿಯ ದಾಟಿ</p>.<p>ಗಾಢ ಪರಿಮಳವಾಗಿ ಗಾಳಿಯಲ್ಲಿ ತೇಲಿ</p>.<p>ಊರ ತುಂಬಾ ಹರಡಿಕೊಳ್ಳುತ್ತಾಳೆ</p>.<p>ಟೀಕಾಚಾರ್ಯರು ಅವಳ ಸ್ಕರ್ಟಿನ</p>.<p>ಅಂಚಿನಲ್ಲಿ ಹೊರಳಿ ಕೊಳೆಯಾಗಿ</p>.<p>ವಾಷಿಂಗ್ಮೆಷಿನ್ನಿನಲ್ಲಿ ತೊಳೆದು ಹೋಗುತ್ತಾರೆ</p>.<p>ಗಟಾರು ಸೇರುತ್ತಾರೆ.</p>.<p>ಎಂದು ‘ಸ್ಕರ್ಟು ತೊಟ್ಟ ಹುಡುಗಿಗೆ’ ಕವನದ ಸಾಲುಗಳ ಮೂಲಕವೇ ಹುಡುಗಿಯರ ವಸ್ತ್ರದ ಬಗ್ಗೆಯೂ ತಗಾದೆ ತೆಗೆಯುವವರಿಗೆ ತಿರುಗೇಟು ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>