‘ಸುಹೇಬ್ ಹಾಗೂ ಮೊಹಮ್ಮದ್ ಕೈಫ್ ಬಂಧಿತರು. ಅವರಿಂದ ಎರಡು ದಂತಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಹೊರ ರಾಜ್ಯದಿಂದ ದಂತಗಳನ್ನು ತಂದಿದ್ದ ಆರೋಪಿಗಳು, ನಗರದಲ್ಲಿ ಗ್ರಾಹಕರಿಗಾಗಿ ಹುಡುಕಾಡುತ್ತಿದ್ದರು. ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಅವರಿಬ್ಬರ ಬಗ್ಗೆ ಭಾತ್ಮಿದಾರರೊಬ್ಬರು ಮಾಹಿತಿ ನೀಡಿದ್ದರು. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಯಿತು’ ಎಂದೂ ತಿಳಿಸಿದರು.
‘ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ವಿವರಿಸಿದರು.