‘ಆರೋಪಿಗಳಿಗೆ ಆಶ್ರಯ ನೀಡಿದ್ದ ಭರತ್, ಅವರು ಶಸ್ತ್ರಾಸ್ತ್ರ ತರಬೇತಿ ಪಡೆಯಲು ತನ್ನ ಜಮೀನಿನಲ್ಲೇ ಜಾಗವನ್ನೂ ಕೊಟ್ಟಿದ್ದಾನೆ. ಅಮೋಲ್ ಕಾಳೆ ಮಾತ್ರವಲ್ಲದೆ, ಇನ್ನೂ ಪ್ರಮುಖ ಆರೋಪಿಗಳ ಜತೆ ಈತ ನಂಟು ಹೊಂದಿರುವ ಅನುಮಾನವಿದೆ. ಹೀಗಾಗಿ, ಹೆಚ್ಚಿನ ವಿಚಾರಣೆಗಾಗಿ 14 ದಿನ ಪೊಲೀಸ್ ಕಸ್ಟಡಿಗೆ ನೀಡಬೇಕು’ ಎಂದು ಎಸ್ಐಟಿ ಪರ ವಕೀಲರು ಮನವಿ ಮಾಡಿದರು.