ಬೆಂಗಳೂರು: ನಗರದ ಜಯದೇವ ಮತ್ತು ಸಾರಕ್ಕಿ ಉಪವಿಭಾಗ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಪ್ರದೇಶಗಳಲ್ಲಿ ಇದೇ 29ರಿಂದ ಜ.2ರವರೆಗೆ ಬೆಳಿಗ್ಗೆ 10.30ರಿಂದ ಸಂಜೆ 6.30ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.
29ರಂದು ಜೆ.ಪಿ. ನಗರ ನಾಲ್ಕನೇ ಹಂತ, ವೆಂಕಟಾದ್ರಿ ಬಡಾವಣೆ, ಕೆ.ಆರ್. ಬಡಾವಣೆ, ಡಿ.ಎಸ್. ಪಾಳ್ಯ ಚರ್ಚ್ ಹಾಗೂ ಅಪೊಲೊ ಸುತ್ತಮುತ್ತ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3.30ರವರೆಗೆ ವ್ಯತ್ಯಯವಾಗಲಿದೆ.
31ರಂದು ಜೆ.ಪಿ. ನಗರ ಎರಡನೇ ಹಂತ, ಮಾರೇನಹಳ್ಳಿ, ಪಿ.ಕೆ. ಕಾಲೊನಿ, ಜೆ.ಪಿ. ನಗರ ಐದನೇ ಹಂತದ ಸಾಯಿ ಪುಷ್ಪಾಂಜಲಿ ಕಲ್ಯಾಣಮಂಟಪ ಸುತ್ತಮುತ್ತ ಹಾಗೂ ಜ.2ರಂದು ಜೆ.ಪಿ. ನಗರ 3,ರ ಮತ್ತು 5ನೇ ಹಂತದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.