‘ಮನೆಯ ಹತ್ತಿರ ಇಬ್ಬರು ಅಪರಿಚಿತರು ಹೋಗಿ,ನನ್ನ ತಾಯಿಗೂ ಧಮ್ಕಿ ಹಾಕಿದ್ದರು. ಅವರನ್ನು ಹಿಡಿದು, ವಿಲ್ಸನ್ ಗಾರ್ಡನ್ ಠಾಣೆಗೆ ಒಪ್ಪಿಸಲಾಯಿತು. ಪೊಲೀಸ್ ಅಧಿಕಾರಿಗಳು ದೂರು ದಾಖಲಿಸಿಕೊಳ್ಳಲಿಲ್ಲ. ಮನೆಯ ಬಳಿ ಸಿಕ್ಕ ಪೆನ್ವೊಂದರಲ್ಲಿ ಬ್ಲೇಡ್ ಪತ್ತೆಯಾಗಿದೆ. ನ್ಯಾಯದ ಪರ ಹೋರಾಟಕ್ಕೆ ನಿಂತಿರುವುದರಿಂದ ಈ ರೀತಿಯ ಅಪಾಯಗಳನ್ನು ಎದುರಿಸಬೇಕಾಗಿದೆ. ಮುನಿರತ್ನ ಜೊತೆಗೆ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಹಾಗಾಗಿ, ನನಗೆ ಹಾಗೂ ಕುಟುಂಬಕ್ಕೆ ಭದ್ರತೆ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.