ಬೆಂಗಳೂರು: ‘ತೋಟಗಾರಿಕೆ ಇಲಾಖೆ ಸಚಿವರು ಮತ್ತು ಅಧಿಕಾರಿಗಳು ಹನಿ ನೀರಾವರಿ ಅಳವಡಿಸಲು ಮತ್ತು ಸಬ್ಸಿಡಿ ಹಣ ರೈತರಿಗೆ ಬಿಡುಗಡೆ ಮಾಡಲು ಕಮಿಷನ್ ಕೇಳಿದ್ದಾರೆ ಎಂದು ಸೂಕ್ಷ್ಮ ಹನಿ ನೀರಾವರಿ ವಿತರಕರ ಸಂಘ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ’ ಎಂದು ಇರಿಗೇಶನ್ ಅಸೋಸಿಯೇಷನ್ ಆಫ್ ಕರ್ನಾಟಕದ(ಐಎಕೆ) ಅಧ್ಯಕ್ಷ ಆರ್.ಪ್ರಸಾದ್ ಸ್ಪಷ್ಟೀಕರಣ ನೀಡಿದ್ದಾರೆ.