ದೇಶದ ಪ್ರಧಾನ ಮಂತ್ರಿ ಈ ರೀತಿ ದ್ವೇಷ ಬಿತ್ತುವ ಭಾಷಣ ಮಾಡುವುದು ಅಕ್ಷಮ್ಯ. ಬಹುತೇಕ ಎಲ್ಲ ಧರ್ಮಿಯ ಮಹಿಳೆಯರು ಮಂಗಳಸೂತ್ರ ಕುರಿತು ಪವಿತ್ರ ಭಾವನೆಗಳನ್ನು ಇಟ್ಟುಕೊಂಡಿರುವಾಗ ರಾಜಕೀಯ ಸ್ವಾರ್ಥಕ್ಕಾಗಿ ಮಹಿಳೆಯರನ್ನು ಪ್ರಚೋದಿಸುತ್ತಿದ್ದಾರೆ. ನೀಚತನ ಮೆರೆಯಲು ಮಹಿಳೆಯರ ಹೆಣ, ತಾಳಿಯಂತಹ ಅಂಶಗಳೇ ಬೇಕಾ ಎಂದು ಸಂಘಟನೆಯ ಅಧ್ಯಕ್ಷೆ ಮೀನಾಕ್ಷಿ ಬಾಳಿ, ಪ್ರಧಾನ ಕಾರ್ಯದರ್ಶಿ ದೇವಿ ಪ್ರಶ್ನಿಸಿದ್ದಾರೆ.