‘ಆರ್ಎಸ್ಎಸ್ ‘ದೆವ್ವ’ದೊಂದಿಗೆ ಜಗಳವಾಡಿ’
‘ಆರ್ಎಸ್ಎಸ್ ಇಲ್ಲಾಂದ್ರೆ ಬಿಜೆಪಿಯು ಜೆಡಿಎಸ್ಗಿಂತಲೂ ಕನಿಷ್ಠ. ನಾವು ದೆವ್ವದ ನೆರಳಿನೊಂದಿಗೆ ಜಗಳವಾಡುತ್ತಿದ್ದೇವೆ. ಅದರಿಂದ ಪ್ರಯೋಜನವೇನೂ ಇಲ್ಲ. ಆರ್ಎಸ್ಎಸ್ ದೆವ್ವವಾದರೆ ಬಿಜೆಪಿ ದೆವ್ವದ ನೆರಳು. ದೆವ್ವದೊಂದಿಗೆ ನೇರವಾಗಿ ಜಗಳವಾಡಿದರೆ ನಮ್ಮ ದೇಶ ಸುಧಾರಣೆ ಆಗಲಿದೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ‘ಜೆಡಿಎಸ್ನಿಂದ ಎಸ್ ತೆಗೆಯಬೇಕು. ಯಾಕೆಂದರೆ ಅಲ್ಲಿ ಜಾತ್ಯತೀತ ತತ್ವ ಉಳಿದಿಲ್ಲ. ಬರೀ ಜೆಡಿ ಎಂದು ಇಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.