ಬೆಂಗಳೂರು:ನಿರ್ಮಾಪಕ, ವಿತರಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಪ್ರದರ್ಶಕ ಎಸ್. ನಾಗರಾಜ ಶೆಟ್ಟಿ ಭಾನುವಾರ ನಿಧನರಾದರು.
ಇವರು ಮೂಲತಃ ಚಿಕ್ಕಮಗಳೂರಿನವರಾಗಿದ್ದಾರೆ. ಏಳ ಜನ ಮಕ್ಕಳನ್ನು ಅಗಲಿದ್ದಾರೆ. ಪರಾಜಿತ, ನಾಗರಹೊಳೆ, ನೂರುಜನ್ಮ, ಕೂಡಿಬಾಳಿದರೆ ಸ್ವರ್ಗಸುಖ ಹಾಗೂ ಶ್ರಾವಣ ಸಂಜೆ ಚಿತ್ರಗಳನ್ನು ನಿರ್ಮಿಸಿದ್ದಾರೆ.