<p><strong>ಬೆಂಗಳೂರು:</strong> ‘ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾಲಯಗಳು ಸಂವಿಧಾನವನ್ನು ಶಿಕ್ಷಣದ ಭಾಗವಾಗಿಸಿಕೊಂಡು ಸಂವಿಧಾನದ ಆಶಯ, ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಬೇಕು. ಆಗ ಮಾತ್ರ ಸಂವಿಧಾನದ ಸಂರಕ್ಷಣೆ ಸಾಧ್ಯ’ ಎಂದು ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯದ ಕುಲಪತಿ ವಿಶ್ವನಾಥ್ ಹೇಳಿದರು.</p>.<p>ಬೆಂಗಳೂರು ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಶಿಕ್ಷಕೇತರ ನೌಕರರ ಸಂಘದ ವತಿಯಿಂದ ಜ್ಞಾನಭಾರತಿ ಆಡಳಿತ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಪ್ರಸ್ತುತ ಕಾಲಘಟ್ಟದಲ್ಲಿ ಭಾರತೀಯ ಸಂವಿಧಾನದ ಸಂರಕ್ಷಣೆ ಮತ್ತು ಅದರ ಮುಂದಿರುವ ಸವಾಲುಗಳು' ಎಂಬ ಚಿಂತನ ಮಂಥನ ವಿಶೇಷ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.</p>.<p>‘ವಿಶ್ವಯುದ್ದದ ನಂತರ ಅನೇಕ ದೇಶಗಳು ಸಂವಿಧಾನವನ್ನು ರಚಿಸಿ ಅಳವಡಿಸಿಕೊಂಡವು. ಆದರೆ, ಕಾಲಾನುಕ್ರಮದಲ್ಲಿ ಅನೇಕ ದೇಶಗಳು ಅಧಃಪತನವಾದವು. ಭಾರತದ ಸಂವಿಧಾನ ಮಾತ್ರ ಇನ್ನೂ ಗಟ್ಟಿಯಾಗಿದೆ. ಭಾರತದ ಸಾಮಾಜಿಕ ವ್ಯವಸ್ಥೆಗೆ ಬಿ.ಆರ್.ಅಂಬೇಡ್ಕರ್ ಸಂವಿಧಾನ ಅತ್ಯಾವಶ್ಯಕ. ಪ್ರಸ್ತುತ ಸಂವಿಧಾನವನ್ನು ಅಲುಗಾಡಿಸುವ ಶಕ್ತಿಗಳು ಕಾರ್ಯಪ್ರವೃತ್ತವಾಗಿವೆ. ಯಾವುದೇ ಸರ್ಕಾರ, ಪಕ್ಷಗಳು ಅಧಿಕಾರಕ್ಕೆ ಬಂದರೂ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿ ಆ ಸಂಸ್ಥೆಗಳನ್ನು ನಿರ್ಜೀವಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ತಿಳಿಸಿದರು.</p>.<p>‘ಕೋಮು ಪ್ರಚೋದನೆ, ಜಾತಿ ತಾರತಮ್ಯ, ಅಸಮಾನತೆ ಹೊಂದಿರುವ ಯಾವುದೇ ಸಮಾಜದ ಏಳಿಗೆ ಸಾಧ್ಯವಿಲ್ಲ. ಶಿಕ್ಷಣದ ಮೂಲಕ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ. ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾಲಯಗಳು ಸಂವಿಧಾನವನ್ನು ಶಿಕ್ಷಣದ ಭಾಗವಾಗಿಸಿ ವಿದ್ಯಾರ್ಥಿಗಳಲ್ಲಿ ಸಂವಿಧಾನದ ಆಶಯಗಳ ಬಗ್ಗೆ ಅರಿವು ಮೂಡಿಸಬೇಕು’ ಎಂದು ಹೇಳಿದರು.</p>.<p>ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ‘ಅಮ್ಮನಿಲ್ಲದ ಮನೆ ಅನಾಥಾವಾಗುವಂತೆ ಅಂಬೇಡ್ಕರ್ ಆಶಯ ಮರೆತ ದೇಶವು ಅನಾಥವಾಗುತ್ತದೆ ಎಂಬ ಭಾವವನ್ನು ಎಲ್ಲಾ ಸಮುದಾಯಗಳು ಅರಿತುಕೊಳ್ಳಬೇಕು. ದೇಶದ ಸಂವಿಧಾನ ಸರ್ವಜನಾಂಗಕ್ಕೆ ಸೇರಿದ್ದು, ಆದರೆ ದಲಿತರಿಗೆ ಮಾತ್ರ ಸೀಮಿತ ಎಂಬ ತಪ್ಪು ಪರಿಕಲ್ಪನೆಯಿದೆ. ಸ್ವಹಿತಾಸಕ್ತಿ ಬಿಟ್ಟು ಸಮಾಜಕ್ಕೆ ಬೆಳಕು ಚೆಲ್ಲಿದ ಮಹನೀಯರನ್ನು ಮರೆತು ತಮಗೆ ಬೇಕಾದವರನ್ನು ಮೆರೆಸುವ ಪಿತೂರಿ ಈ ದೇಶದಲ್ಲಿ ನಡೆಯುತ್ತಿದೆ’ ಎಂದರು.</p>.<p>ಕಾರ್ಯಕ್ರಮದಲ್ಲಿ ರಾಜಕೀಯ ಚಿಂತಕರಾದ ಕವಿತಾ ರೆಡ್ಡಿ, ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ರಮೇಶ್, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಜಯಕರ ಎಸ್.ಎಂ, ಕುಲಸಚಿವೆ ಕೆ.ಟಿ. ಶಾಂತಲಾ, ಕುಲಸಚಿವ (ಮೌಲ್ಯಮಾಪನ) ಪ್ರೊ.ಸಿ.ಎಸ್.ಕರಿಗಾರ್, ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಶಿಕ್ಷಕೇತರ ನೌಕರರ ಸಂಘದ ಅಧ್ಯಕ್ಷ ಶಿವಪ್ಪ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾಲಯಗಳು ಸಂವಿಧಾನವನ್ನು ಶಿಕ್ಷಣದ ಭಾಗವಾಗಿಸಿಕೊಂಡು ಸಂವಿಧಾನದ ಆಶಯ, ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಬೇಕು. ಆಗ ಮಾತ್ರ ಸಂವಿಧಾನದ ಸಂರಕ್ಷಣೆ ಸಾಧ್ಯ’ ಎಂದು ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯದ ಕುಲಪತಿ ವಿಶ್ವನಾಥ್ ಹೇಳಿದರು.</p>.<p>ಬೆಂಗಳೂರು ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಶಿಕ್ಷಕೇತರ ನೌಕರರ ಸಂಘದ ವತಿಯಿಂದ ಜ್ಞಾನಭಾರತಿ ಆಡಳಿತ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಪ್ರಸ್ತುತ ಕಾಲಘಟ್ಟದಲ್ಲಿ ಭಾರತೀಯ ಸಂವಿಧಾನದ ಸಂರಕ್ಷಣೆ ಮತ್ತು ಅದರ ಮುಂದಿರುವ ಸವಾಲುಗಳು' ಎಂಬ ಚಿಂತನ ಮಂಥನ ವಿಶೇಷ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.</p>.<p>‘ವಿಶ್ವಯುದ್ದದ ನಂತರ ಅನೇಕ ದೇಶಗಳು ಸಂವಿಧಾನವನ್ನು ರಚಿಸಿ ಅಳವಡಿಸಿಕೊಂಡವು. ಆದರೆ, ಕಾಲಾನುಕ್ರಮದಲ್ಲಿ ಅನೇಕ ದೇಶಗಳು ಅಧಃಪತನವಾದವು. ಭಾರತದ ಸಂವಿಧಾನ ಮಾತ್ರ ಇನ್ನೂ ಗಟ್ಟಿಯಾಗಿದೆ. ಭಾರತದ ಸಾಮಾಜಿಕ ವ್ಯವಸ್ಥೆಗೆ ಬಿ.ಆರ್.ಅಂಬೇಡ್ಕರ್ ಸಂವಿಧಾನ ಅತ್ಯಾವಶ್ಯಕ. ಪ್ರಸ್ತುತ ಸಂವಿಧಾನವನ್ನು ಅಲುಗಾಡಿಸುವ ಶಕ್ತಿಗಳು ಕಾರ್ಯಪ್ರವೃತ್ತವಾಗಿವೆ. ಯಾವುದೇ ಸರ್ಕಾರ, ಪಕ್ಷಗಳು ಅಧಿಕಾರಕ್ಕೆ ಬಂದರೂ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿ ಆ ಸಂಸ್ಥೆಗಳನ್ನು ನಿರ್ಜೀವಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ತಿಳಿಸಿದರು.</p>.<p>‘ಕೋಮು ಪ್ರಚೋದನೆ, ಜಾತಿ ತಾರತಮ್ಯ, ಅಸಮಾನತೆ ಹೊಂದಿರುವ ಯಾವುದೇ ಸಮಾಜದ ಏಳಿಗೆ ಸಾಧ್ಯವಿಲ್ಲ. ಶಿಕ್ಷಣದ ಮೂಲಕ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ. ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾಲಯಗಳು ಸಂವಿಧಾನವನ್ನು ಶಿಕ್ಷಣದ ಭಾಗವಾಗಿಸಿ ವಿದ್ಯಾರ್ಥಿಗಳಲ್ಲಿ ಸಂವಿಧಾನದ ಆಶಯಗಳ ಬಗ್ಗೆ ಅರಿವು ಮೂಡಿಸಬೇಕು’ ಎಂದು ಹೇಳಿದರು.</p>.<p>ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ‘ಅಮ್ಮನಿಲ್ಲದ ಮನೆ ಅನಾಥಾವಾಗುವಂತೆ ಅಂಬೇಡ್ಕರ್ ಆಶಯ ಮರೆತ ದೇಶವು ಅನಾಥವಾಗುತ್ತದೆ ಎಂಬ ಭಾವವನ್ನು ಎಲ್ಲಾ ಸಮುದಾಯಗಳು ಅರಿತುಕೊಳ್ಳಬೇಕು. ದೇಶದ ಸಂವಿಧಾನ ಸರ್ವಜನಾಂಗಕ್ಕೆ ಸೇರಿದ್ದು, ಆದರೆ ದಲಿತರಿಗೆ ಮಾತ್ರ ಸೀಮಿತ ಎಂಬ ತಪ್ಪು ಪರಿಕಲ್ಪನೆಯಿದೆ. ಸ್ವಹಿತಾಸಕ್ತಿ ಬಿಟ್ಟು ಸಮಾಜಕ್ಕೆ ಬೆಳಕು ಚೆಲ್ಲಿದ ಮಹನೀಯರನ್ನು ಮರೆತು ತಮಗೆ ಬೇಕಾದವರನ್ನು ಮೆರೆಸುವ ಪಿತೂರಿ ಈ ದೇಶದಲ್ಲಿ ನಡೆಯುತ್ತಿದೆ’ ಎಂದರು.</p>.<p>ಕಾರ್ಯಕ್ರಮದಲ್ಲಿ ರಾಜಕೀಯ ಚಿಂತಕರಾದ ಕವಿತಾ ರೆಡ್ಡಿ, ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ರಮೇಶ್, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಜಯಕರ ಎಸ್.ಎಂ, ಕುಲಸಚಿವೆ ಕೆ.ಟಿ. ಶಾಂತಲಾ, ಕುಲಸಚಿವ (ಮೌಲ್ಯಮಾಪನ) ಪ್ರೊ.ಸಿ.ಎಸ್.ಕರಿಗಾರ್, ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಶಿಕ್ಷಕೇತರ ನೌಕರರ ಸಂಘದ ಅಧ್ಯಕ್ಷ ಶಿವಪ್ಪ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>