ಗ್ರಾಮದ ಸರ್ಕಾರಿ ಜಾಗದಲ್ಲಿ ದೇವಸ್ಥಾನ, ರಾಜಕಾಲುವೆ, ನೀರಿನ ಮೂಲಗಳು ಹಾಗೂ ಸ್ಮಶಾನವಿದೆ. ತಲತಲಾಂತರದಿಂದ ಗ್ರಾಮಸ್ಥರು ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಬಗ್ಗೆ ಮತ್ತು ಈಗಾಗಲೇ ನೀಡಿರುವ ನಿವೇಶಗಳು ಹಾಗೂ ಶಾಲೆ, ಸ್ಮಶಾನ ಮತ್ತಿತರ ಗ್ರಾಮದ ಅನುಕೂಲಕ್ಕಾಗಿ ಜಾಗವನ್ನು ಮೀಸಲಿಡಬೇಕೆಂದು ಈ ಹಿಂದೆ ಗ್ರಾಮಸ್ಥರು ಸಲ್ಲಿಸಿದ್ದ ಮನವಿಯನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ನೀಡಲಾಗಿದೆ ಎಂದು ಪಿಡಿಒ ಪೂಣಚ್ಚ ತಿಳಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಲಾವಣ್ಯ ನರಸಿಂಹಮೂರ್ತಿ ಇದ್ದರು.