‘ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಕೋಮು ಗಲಭೆ ಸೃಷ್ಟಿಸಿ, ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸಕ್ಕೆ ಬಿಜೆಪಿ ತನ್ನ ಸಹೋದರ ಸಂಘಟನೆಗಳಿಗೆ ಅಣಿಗೊಳಿಸುತ್ತಿರುವುದು ಬಹಿರಂಗವಾಗುತ್ತಿದೆ’ ಎಂದು ‘ಎಕ್ಸ್’ ಖಾತೆಯಲ್ಲಿ ಹರಿಪ್ರಸಾದ್ ಬರೆದಿದ್ದರು. ಪುನೀತ್ ಕೆರೆಹಳ್ಳಿ ಹೆಸರು ಉಲ್ಲೇಖಿಸಿ, ಸ್ಕ್ರೀನ್ಶಾಟ್ವೊಂದನ್ನು ಪ್ರಕಟಿಸಿದ್ದರು.