ಬೆಂಗಳೂರು: ‘ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆಯಲ್ಲಿ ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ, ಈ ಹಂತದಲ್ಲಿ ಪೊಲೀಸ್ ತನಿಖೆಯಲ್ಲಿ ಮೂಗು ತೂರಿಸುವುದಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
‘ಒಂದು ವೇಳೆ ಅಮಾಯಕರು ಬಂಧಿಸಲ್ಪಟ್ಟಿದ್ದರೆ, ಅದನ್ನು ಅವರು ಸಾಬೀತುಪಡಿಸಿದರೆ, ಪೊಲೀಸರು ಬಿಡುತ್ತಾರೆ’ ಎಂದು ಯಡಿಯೂರಪ್ಪ ಅವರು ತಮ್ಮನ್ನು ಭೇಟಿ ಮಾಡಿದ ಹಜರತ್ ಮೌಲಾನಾ ಸಗೀರ್ ಅಹ್ಮದ್ ರಶ್ದಿ ನಿಯೋಗಕ್ಕೆ ತಿಳಿಸಿದರು.
‘ಬಂಧನಕ್ಕೆ ಒಳಗಾದವರಲ್ಲಿ ಅಮಾಯಕರು ಇದ್ದಾರೆ. ಅವರನ್ನು ಬಿಡುಗಡೆ ಮಾಡಬೇಕು‘ ಎಂದು ನಿಯೋಗವು ಮನವಿ ಸಲ್ಲಿಸಿತು.