<p><strong>ಬೆಂಗಳೂರು: </strong>ಹೆಸರಘಟ್ಟ ಹೋಬಳಿ ಕೆಂಪಾಪುರ ಗ್ರಾಮದಲ್ಲಿನಿರ್ಮಾಣವಾಗಿರುವ ಶುದ್ದನೀರಿನ ಘಟಕವು ಗ್ರಾಮದಿಂದ ಹೊರಗೆ ಇದ್ದು, ಗ್ರಾಮಸ್ಥರಿಗೆಸೌಲಭ್ಯ ಪಡೆಯುವುದುಕಷ್ಟವಾಗಿದೆ. ನೀರಿನ ಘಟಕ ಇದ್ದು, ಉಪಯೋಗಕ್ಕೆ ಬಾರದಂತಾಗಿದೆ.<br />‘ಘಟಕವನ್ನು ಗ್ರಾಮದಿಂದ ಹೊರಗೆ ನಿರ್ಮಾಣ ಮಾಡಲಾಗಿದೆ. ಈ ಪ್ರದೇಶದಲ್ಲಿ ಸುಮಾರು 150 ಮನೆಗಳಿದ್ದು, ದ್ವಿಚಕ್ರವಾಹನ ಉಳ್ಳವರು ಮಾತ್ರ ಅದರ ಉಪಯೋಗ ಪಡೆಯುತ್ತಿದ್ದಾರೆ. ಉಳಿದಜನರು ಪಂಚಾಯಿತಿಯಿಂದ<br />ಬರುವ ಕೊಳವೆ ನೀರನ್ನೇ ಅವಲಂಬಿಸಿದ್ದಾರೆ.’ ಎಂದು ಗ್ರಾಮದ ನಿವಾಸಿಆರ್.ಕಿರಣ್ ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಕಳೆದ ಒಂದು ವರ್ಷದಿಂದ ಪರಿಶುದ್ದ ನೀರಿನ ಘಟಕವನ್ನು ಗ್ರಾಮದ ಒಳಗೆ ಸ್ಥಳಾಂತರ ಮಾಡಿಕೊಡುವಂತೆ ಕೋರಿದ್ದೇವೆ. ಆದರೆ, ಪಂಚಾಯಿತಿ ಅಧ್ಯಕ್ಷರು, ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಗ್ರಾಮದ ನಿವಾಸಿ ಸರೋಜಮ್ಮ ಆರೋಪಿಸಿದರು.</p>.<p>ಕಸಘಟ್ಟಪುರ ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿ ವೆಂಕಟೇಶ್ ಪ್ರತಿಕ್ರಿಯಿಸಿ‘ಗ್ರಾಮದ ಒಳಗೆಘಟಕ ಸ್ಥಾಪಿಸಲು ಜಾಗವಿಲ್ಲದ ಕಾರಣ ಗ್ರಾಮದ ಹೊರಗೆ ಸ್ಥಾಪಿಸಲಾಯಿತು. ಜಾಗ ಕೊಟ್ಟರೆ ಖಂಡಿತ ಗ್ರಾಮದ ಒಳಗೆ ಸ್ಥಳಾಂತರಿಸಲಾಗುವುದು’ ಎಂದು<br />ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಹೆಸರಘಟ್ಟ ಹೋಬಳಿ ಕೆಂಪಾಪುರ ಗ್ರಾಮದಲ್ಲಿನಿರ್ಮಾಣವಾಗಿರುವ ಶುದ್ದನೀರಿನ ಘಟಕವು ಗ್ರಾಮದಿಂದ ಹೊರಗೆ ಇದ್ದು, ಗ್ರಾಮಸ್ಥರಿಗೆಸೌಲಭ್ಯ ಪಡೆಯುವುದುಕಷ್ಟವಾಗಿದೆ. ನೀರಿನ ಘಟಕ ಇದ್ದು, ಉಪಯೋಗಕ್ಕೆ ಬಾರದಂತಾಗಿದೆ.<br />‘ಘಟಕವನ್ನು ಗ್ರಾಮದಿಂದ ಹೊರಗೆ ನಿರ್ಮಾಣ ಮಾಡಲಾಗಿದೆ. ಈ ಪ್ರದೇಶದಲ್ಲಿ ಸುಮಾರು 150 ಮನೆಗಳಿದ್ದು, ದ್ವಿಚಕ್ರವಾಹನ ಉಳ್ಳವರು ಮಾತ್ರ ಅದರ ಉಪಯೋಗ ಪಡೆಯುತ್ತಿದ್ದಾರೆ. ಉಳಿದಜನರು ಪಂಚಾಯಿತಿಯಿಂದ<br />ಬರುವ ಕೊಳವೆ ನೀರನ್ನೇ ಅವಲಂಬಿಸಿದ್ದಾರೆ.’ ಎಂದು ಗ್ರಾಮದ ನಿವಾಸಿಆರ್.ಕಿರಣ್ ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಕಳೆದ ಒಂದು ವರ್ಷದಿಂದ ಪರಿಶುದ್ದ ನೀರಿನ ಘಟಕವನ್ನು ಗ್ರಾಮದ ಒಳಗೆ ಸ್ಥಳಾಂತರ ಮಾಡಿಕೊಡುವಂತೆ ಕೋರಿದ್ದೇವೆ. ಆದರೆ, ಪಂಚಾಯಿತಿ ಅಧ್ಯಕ್ಷರು, ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಗ್ರಾಮದ ನಿವಾಸಿ ಸರೋಜಮ್ಮ ಆರೋಪಿಸಿದರು.</p>.<p>ಕಸಘಟ್ಟಪುರ ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿ ವೆಂಕಟೇಶ್ ಪ್ರತಿಕ್ರಿಯಿಸಿ‘ಗ್ರಾಮದ ಒಳಗೆಘಟಕ ಸ್ಥಾಪಿಸಲು ಜಾಗವಿಲ್ಲದ ಕಾರಣ ಗ್ರಾಮದ ಹೊರಗೆ ಸ್ಥಾಪಿಸಲಾಯಿತು. ಜಾಗ ಕೊಟ್ಟರೆ ಖಂಡಿತ ಗ್ರಾಮದ ಒಳಗೆ ಸ್ಥಳಾಂತರಿಸಲಾಗುವುದು’ ಎಂದು<br />ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>