ಬೆಂಗಳೂರು: ಹೆಸರಘಟ್ಟ ಹೋಬಳಿ ಕೆಂಪಾಪುರ ಗ್ರಾಮದಲ್ಲಿನಿರ್ಮಾಣವಾಗಿರುವ ಶುದ್ದನೀರಿನ ಘಟಕವು ಗ್ರಾಮದಿಂದ ಹೊರಗೆ ಇದ್ದು, ಗ್ರಾಮಸ್ಥರಿಗೆಸೌಲಭ್ಯ ಪಡೆಯುವುದುಕಷ್ಟವಾಗಿದೆ. ನೀರಿನ ಘಟಕ ಇದ್ದು, ಉಪಯೋಗಕ್ಕೆ ಬಾರದಂತಾಗಿದೆ.
‘ಘಟಕವನ್ನು ಗ್ರಾಮದಿಂದ ಹೊರಗೆ ನಿರ್ಮಾಣ ಮಾಡಲಾಗಿದೆ. ಈ ಪ್ರದೇಶದಲ್ಲಿ ಸುಮಾರು 150 ಮನೆಗಳಿದ್ದು, ದ್ವಿಚಕ್ರವಾಹನ ಉಳ್ಳವರು ಮಾತ್ರ ಅದರ ಉಪಯೋಗ ಪಡೆಯುತ್ತಿದ್ದಾರೆ. ಉಳಿದಜನರು ಪಂಚಾಯಿತಿಯಿಂದ
ಬರುವ ಕೊಳವೆ ನೀರನ್ನೇ ಅವಲಂಬಿಸಿದ್ದಾರೆ.’ ಎಂದು ಗ್ರಾಮದ ನಿವಾಸಿಆರ್.ಕಿರಣ್ ಅಸಮಾಧಾನ ವ್ಯಕ್ತಪಡಿಸಿದರು.