ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪಿ.ವಿ.ನಾರಾಯಣ, ‘ಹಳಗನ್ನಡ ಶ್ರೇಷ್ಠ ಎಂಬುದನ್ನು ಒಪ್ಪಿಕೊಳ್ಳಬೇಕಾಗಿಲ್ಲ. ಆದರೆ, ಹಳಗನ್ನಡದಲ್ಲೂ ಶ್ರೇಷ್ಠವಾದದ್ದಿದೆ ಎಂಬುದನ್ನು ಗುರುತಿಸಬೇಕು. ಮೂಲಭೂತವಾದ ಮನುಷ್ಯನ ಭಾವನೆಗಳು, ಆಗುಹೋಗುಗಳು, ನೋವುಗಳು ಎಲ್ಲ ಕಾಲಕ್ಕೂ ಒಂದೇ ಆಗಿರುತ್ತದೆ. ಇದರಲ್ಲಿ ವ್ಯತ್ಯಾಸವಾಗುವುದಿಲ್ಲ’ ಎಂದರು.