ಗ್ರಾಮದ ಪ್ರತಾಪ್ ಅವರ ಇಟ್ಟಿಗೆ ಕಾರ್ಖಾನೆಯಲ್ಲಿ 8 ಅಡಿ ಉದ್ದದ ಹೆಬ್ಬಾವು ಸೇರಿಕೊಂಡಿತ್ತು. ಅವರು ಉರಗ ರಕ್ಷಕರಿಗೆ ಮಾಹಿತಿ ನೀಡಿದರು. ಶ್ಯಾಮ್, ಮನು ಅಗ್ನಿ ಮತ್ತು ಚೇತನ್ ಅಗ್ನಿ ಬಂದು ಹೆಬ್ಬಾವು ಹಿಡಿದರು.
ಹೆಬ್ಬಾವುಗಳು ಬಯಲುಸೀಮೆ ಪ್ರದೇಶಗಳಲ್ಲಿ ಕಂಡು ಬರುವುದು ಅಪರೂಪ. ಕಾರ್ಖಾನೆಯಲ್ಲಿರುವ ನಾಯಿಯೊಂದು ಮರಿ ಹಾಕಿದ್ದು, ಅದನ್ನು ತಿನ್ನಲು ಬಂದಿರಬಹುದು ಎಂದು ಉರಗ ತಜ್ಞ ಶ್ಯಾಮ್ ಮಾಹಿತಿ ನೀಡಿದರು.
ಇಟ್ಟಿಗೆ ಕಾರ್ಖಾನೆ ಸಮೀಪ ರಾಮದೇವರ ಬೆಟ್ಟದ ಅರಣ್ಯ ಪ್ರದೇಶವಿದ್ದು, ಅಲ್ಲಿ ಹೆಬ್ಬಾವುಗಳು ಆಗಾಗ ಕಾಣಿಸುತ್ತಿರುತ್ತವೆ. ಅಲ್ಲಿಂದ ಹಾವು ಬಂದಿರಬಹುದು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಹೆಬ್ಬಾವು ರಕ್ಷಣೆ ಮಾಡಿದ ಉರಗ ರಕ್ಷಕರಾದ ಶ್ಯಾಮ್ ಮನು ಅಗ್ನಿ ಮತ್ತು ಚೇತನ್ ಅಗ್ನಿ