‘ರೈತರ ಪರ ಕರಡು ರಚನಾ ಸಮಿತಿಯನ್ನು ಮಾಡಿದ್ದೇವೆ. ಅದರಲ್ಲಿ ಭೂಮಿ ಇರುವ ಕೃಷಿಕರು, ಜಮೀನು ಇಲ್ಲದ ಕೃಷಿಕರು, ಕೂಲಿಕಾರರು, ಆದಿವಾಸಿಗಳು ಸಹಿತ ಕೃಷಿ ಸಮುದಾಯದೊಳಗೆ ಬರುವ ಎಲ್ಲರನ್ನೂ ಸೇರಿಸಿಕೊಳ್ಳಲಾಗಿದೆ. ಪ್ರತಿ ರಾಜ್ಯಗಳಲ್ಲಿಯೂ ಈ ಕರಡು ರಚನೆಗೆ ಸಲಹೆಗಳು ಬರಬೇಕು. ಯಾಕೆಂದರೆ ದೇಶದಲ್ಲಿ ಒಂದೇ ರೀತಿಯ ಕೃಷಿ, ಒಂದೇ ರೀತಿಯ ಹವಾಮಾನ ಇಲ್ಲ. ಭಿನ್ನವಾದ ಹವಾಮಾನಕ್ಕೆ ಪೂರಕವಾದ ಕೃಷಿಗಳ ಮಾಹಿತಿ ಇರಬೇಕು’ ಎಂದರು.