ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಲು ಇಸ್ಲಾಂ ಹೇಳಿದೆಯಾ: ರೋಷನ್ ಬೇಗ್‌ ಪ್ರಶ್ನೆ

Last Updated 14 ಆಗಸ್ಟ್ 2020, 4:03 IST
ಅಕ್ಷರ ಗಾತ್ರ

ಬೆಂಗಳೂರು: ‘ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಿ, ಆಸ್ತಿ–ಪಾಸ್ತಿ ನಾಶ ಮಾಡಿ ಎಂದು ಇಸ್ಲಾಂ ಹೇಳಿದೆಯಾ? ನಿಮಗೆಲ್ಲಾ ಯಾವಾಗ ಬುದ್ಧಿ ಬರುತ್ತದೆ’ ಎಂದು ಮಾಜಿ ಸಚಿವ ಆರ್‌.ರೋಷನ್ ಬೇಗ್‌ ಪ್ರಶ್ನಿಸಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ದೇವಸ್ಥಾನದ ರಕ್ಷಣೆಗೆ ನಿಂತ ಮುಸ್ಲಿಂ ಯುವಕರಿಗೆ ಸಲಾಂ ಹೇಳುತ್ತೇನೆ’ಎಂದರು.

‘ಪೊಲೀಸರು ಹಲವು ತಿಂಗಳಿಂದ ಕೊರೊನಾ ವಿರುದ್ಧ ಹೋರಾಡುತ್ತಾ ಹೈರಾಣಾಗಿದ್ದಾರೆ. ಕಿಡಿಗೇಡಿಗಳು ಅವರ ಮೇಲೆ ಹೋಗಿ ದಾಳಿ ಮಾಡಿದ್ದಾರೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಒಂದು ವೇಳೆ ಇನ್ಸ್‌ಪೆಕ್ಟರ್‌ ಕೇಸು ದಾಖಲು ಮಾಡಿಲ್ಲ ಎಂದಾದರೆ, ಮೇಲಿನ ಅಧಿಕಾರಿಗಳ ಬಳಿಗೆ ಹೋಗಬೇಕಿತ್ತು. ಅದನ್ನು ಬಿಟ್ಟು ಠಾಣೆ ಮೇಲೆ ದಾಳಿ ಮಾಡಿದರಲ್ಲ ನಿಮ್ಮ ಬುದ್ಧಿಗೆ ಏನಾಗಿದೆ’ ಎಂದು ರೋಷನ್‌ ಬೇಗ್ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT