‘ಹಸಿರು ದಳದವರ ಸಹಾಯದಿಂದ ಎಲ್ಲರಿಗೂ ಹಸಿರು ಕಾರ್ಡ್ ಕೊಟ್ಟಿದಾರೆ. ಇದರಿಂದ ಸ್ಕಾಲರ್ಶಿಪ್ ಸಿಕ್ಕಿದೆ. ಓದುವುದಕ್ಕೆ ಗ್ರಂಥಾಲಯದ ವ್ಯವಸ್ಥೆಯನ್ನೂ ಮಾಡಿದ್ದಾರೆ. ಕಸದಿಂದ ಆಧುನಿಕ ಪರಿಕರಗಳನ್ನು ತಯಾರಿಸಲು ನಮಗೆ ತರಬೇತಿ ನೀಡಿದ್ದಾರೆ. ಆದರೆ ನಮಗೆ ಕುಡಿಯಲು ಶುದ್ಧವಾದ ನೀರು ಸಿಗುತ್ತಿಲ್ಲ. ಮನೆ, ಗ್ರಂಥಾಲಯದಲ್ಲಿ ನೀರಿನ ಸೌಲಭ್ಯ ಇಲ್ಲ’ ಎಂದು ಕಾಗದ ಆಯುವವರ ಸಮುದಾಯದ ಬಾಲಕಿ, ಮೇರಿ ತಮ್ಮ ಧ್ವನಿಗೂಡಿಸಿದರು.