ಬಾಬರಿ ಮಸೀದಿ ಕೆಡವಿದ್ದು, ಗಾಂಧಿ ಹತ್ಯೆ, ಪ್ಯಾಲೆಸ್ಟೀನ್ ಯುದ್ಧ, ಟಿಪ್ಪುವಿನ ಮೈಸೂರು ಯುದ್ಧ ಇವೆಲ್ಲ ಮಾಡಿರುವ ಗಾಯಗಳು ಆಳವಾದವು. ಬಾಬರಿ ಮಸೀದಿ ಕೆಡವಿದ ನಂತರ ಬೊಳುವಾರು ಮಹಮದ್ ಕುಂಞಿ ಅವರು ‘ಒಂದು ತುಂಡು ಗೋಡೆ’ ಕಥೆಯನ್ನು ಬರೆದಿದ್ದರು. ಅದನ್ನು ಆಧರಿಸಿ ‘ಪಾತುಮ್ಮ’ ಸಿನಿಮಾ ತಯಾರಾಯಿತು. ಆ ಸಿನಿಮಾ ಬರವಣಿಗೆ, ಕಲಾ ನಿರ್ದೇಶನದಲ್ಲಿ ತೊಡಗಿಕೊಂಡ ಸಂದರ್ಭದ ಪಯಣವನ್ನೇ ಚಂದ್ರಿಕಾ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ನವ್ಯದವರು ಪ್ರದರ್ಶನ ಕಲೆಗಳನ್ನು ಸಾಹಿತ್ಯದಿಂದ ದೂರ ಮಾಡಿಬಿಟ್ಟಿದ್ದರು. ಈ ಕೃತಿಯು ಅಂತಹ ಪ್ರಭೇದಕ್ಕೆ ಸೇರಿದ್ದು ಎಂದು ರಹಮತ್ ತಿಳಿಸಿದರು.