‘ಯಶವಂತಪುರ–ಕನ್ನೂರು ಎಕ್ಸ್ಪ್ರೆಸ್ ರೈಲು, ರಾತ್ರಿ 8.56ರ ಸುಮಾರಿಗೆ ಕಾರ್ಮೆಲ್ರಾಮ್ ನಿಲ್ದಾಣಕ್ಕೆ ಬಂದು ನಿಂತಿತ್ತು. ತಂದೆ–ತಾಯಿಯನ್ನು ರೈಲಿನಲ್ಲಿ ಹತ್ತಿಸಿದ್ದ ವಿಕ್ರಮ್, ಲಗೇಜು ಇಡುವುದಕ್ಕಾಗಿ ರೈಲಿನೊಳಗೆ ಹೋಗಿದ್ದರು. ಅದಾಗಿ ನಿಮಿಷದಲ್ಲೇ ರೈಲು ನಿಲ್ದಾಣದಿಂದ ಹೊರಟಿತ್ತು. ಪೋಷಕರಿಗೆ ‘ಹ್ಯಾಪಿ ಜರ್ನಿ’ ಹೇಳುತ್ತ ಅವಸರದಲ್ಲೇ ಕಿಟಕಿ ಬಳಿ ಬಂದಿದ್ದ ವಿಕ್ರಮ್, ರೈಲು ಹೊರಟಿದ್ದ ವಿರುದ್ಧ ದಿಕ್ಕಿನಲ್ಲಿ ಇಳಿದಿದ್ದರು. ಆಗ ಆಯತಪ್ಪಿ ರೈಲು ಹಾಗೂ ಫ್ಲಾಟ್ಫಾರಂ ನಡುವಿನ ಜಾಗದಲ್ಲಿ ಬಿದ್ದರು. ಅವರ ಮೇಲೆಯೇ ರೈಲಿನ ಚಕ್ರಗಳು ಹರಿದು ಹೋದವು’ ಎಂದು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಹೇಳಿದರು.