ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ರೈಲು ನಿಲ್ದಾಣ ಸ್ಫೋಟ: ಜೆಇಎಂ ಬೆದರಿಕೆ

Last Updated 15 ಸೆಪ್ಟೆಂಬರ್ 2019, 20:35 IST
ಅಕ್ಷರ ಗಾತ್ರ

ಚಂಡೀಗಡ (ಪಿಟಿಐ): ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ರೈಲು ನಿಲ್ದಾಣಗಳ ಮೇಲೆ ಅಕ್ಟೋಬರ್‌ 8ರಂದು ಬಾಂಬ್‌ ದಾಳಿ ನಡೆಸುವುದಾಗಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಷ್‌–ಎ–ಮೊಹಮ್ಮದ್‌ (ಜೆಇಎಂ) ಬೆದರಿಕೆ ಹಾಕಿದೆ.

ಜೆಇಎಂ ಕಳಿಸಿದೆ ಎನ್ನಲಾದ, ಹಿಂದಿಯಲ್ಲಿರುವ ಪತ್ರವೊಂದು ರೋಹ್ಟಕ್‌ ರೈಲ್ವೆ ಪೊಲೀಸ್‌ ಠಾಣೆಗೆ ಬಂದಿದೆ. ಪತ್ರದಲ್ಲಿ ಮಸೂದ್‌ ಅಹ್ಮದ್ ಎಂಬ ವ್ಯಕ್ತಿಯ ಸಹಿ ಇದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಮುಂಬೈ, ಚೆನ್ನೈ ಹರಿಯಾಣದ ರೋಹ್ಟಕ್‌, ರೇವಾರಿ, ಹಿಸ್ಸಾರ್‌ ಹಾಗೂ ರಾಜಸ್ಥಾನದ ಕೆಲವು ರೈಲು ನಿಲ್ದಾಣಗಳನ್ನು ಸ್ಫೋಟಿಸಲಾಗುವುದು ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ’ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT