ಬಿಬಿಎಂಪಿ ಮಳೆನೀರು ಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಸಲ್ಲಿಸಿರುವ ಹೆಚ್ಚುವರಿ ಪ್ರಮಾಣಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದ ಪಾಲಿಕೆ ಪರ ವಕೀಲ ಕೆ.ಎನ್.ಪುಟ್ಟೇಗೌಡ, ನಗರದಲ್ಲಿರುವ ಮಳೆ ನೀರು ಕಾಲುವೆಗಳಿಗೆ ತಡೆಗೋಡೆ ನಿರ್ಮಾಣ ಹಾಗೂ ತಂತಿ ಬೇಲಿ ಅಳವಡಿಕೆ ಸೇರಿ ಕಾಲುವೆಗಳ ದುರಸ್ತಿಗೆಸರ್ಕಾರ ಹಣ ಬಿಡುಗಡೆ ಮಾಡಿದೆ. ಮೊದಲು ಹೆಚ್ಚು ಅಪಾಯಕಾರಿಯಾದ ಕಾಲುವೆಗಳಿಂದಲೇ ದುರಸ್ತಿಕಾರ್ಯ ಆರಂಭಿಸಿ ಹಂತ ಹಂತವಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅದಕ್ಕೆ ಎರಡು ವರ್ಷ ಸಮಯ ಬೇಕಾಗಲಿದೆ ಎಂದರು.