‘ಈಗಾಗಲೇ ಎಪಿಎಂಸಿ ಕಾಯ್ದೆಯಿಂದ ಶೇ 90ರಷ್ಟು ಕೃಷಿ ಮಾರುಕಟ್ಟೆ ನಿರ್ಜೀವಗೊಂಡಿದೆ. ಕಂದಾಯ ಕಾಯ್ದೆ ನೀತಿಯಿಂದಾಗಿ ಪ್ರತಿದಿನ ರೈತರು ಕೃಷಿ ಭೂಮಿಯನ್ನು ಕಳೆದುಕೊಂಡು, ಕೃಷಿ ಕ್ಷೇತ್ರದಿಂದಲೇ ವಂಚಿತರಾಗುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಮಾತ್ರ ಧರ್ಮದ ಹೆಸರಿನಲ್ಲಿ ಜಾನುವಾರು ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಇದರಿಂದ ರೈತರು ಪಶುಪಾಲನೆ, ಹೈನುಗಾರಿಕೆ ಮಾಡುವುದು ಕಷ್ಟವಾಗಿದೆ’ ಎಂದು ಹೇಳಿದರು.