ರಾಜಕಾಲುವೆಗೆ ಅಡ್ಡಲಾಗಿರುವ ರೈಲ್ವೆ ಸೇತುವೆ, ಜೋರು ಮಳೆ ಬಂದರೆ ಪಕ್ಕದ ಬಡಾವಣೆಗಳಿಗೆ ನುಗ್ಗುವ ನೀರು, ಕಳೆದ ವರ್ಷ ಆಗಿದ್ದ ಹಾನಿಯ ಕನವರಿಕೆಯಲ್ಲೇ ಇರುವ ಬಡಾವಣೆಗಳ ಜನ... ಇದು ಹೆಣ್ಣೂರು–ಬಾಗಲೂರು ರಸ್ತೆಯ ಪಕ್ಕದಲ್ಲಿರುವ ಹೊರಮಾವು ವಡ್ಡರಪಾಳ್ಯ, ಅನುಗ್ರಹ ಲೇಔಟ್, ಕಾವೇರಿನಗರದ ಶ್ರೀಸಾಯಿ ಬಡಾವಣೆ ಸ್ಥಿತಿ.