‘ಬೆಂಗಳೂರಿನ ಪುರಭವನದಲ್ಲಿ, ಬಹುಶಃ 1952ರಲ್ಲಿ ಮೊದಲ ಬಾರಿ ನಮ್ಮ ಗುರುಗಳ ಸರೋದ್ ವಾದನ ಕೇಳಿದೆ. ಅವರು ಯಾರೆಂದರೆ ಸರೋದ್ ಮಾಂತ್ರಿಕ ಉಸ್ತಾದ್ ಅಲಿ ಅಕ್ಬರ್ ಖಾನ್ ಸಾಹೇಬರು. ಈ ಮಾತನ್ನು ಒತ್ತಿ ಹೇಳಬೇಕಾಗಿದೆ. ಇಲ್ಲವಾದರೆ ನನ್ನಿಂದ ಒಂದು ಘೋರ, ನೈತಿಕ ತಪ್ಪಾದೀತು. ಅಂದು ಪಂಡಿತ್ ರವಿಶಂಕರ್ ಅವರೊಂದಿಗಿನ ಜುಗಲ್ಬಂದಿ ಕಛೇರಿಯಲ್ಲಿ ಸರೋದ್ ಮಾಂತ್ರಿಕ ಉಸ್ತಾದ್ ಅಲಿ ಅಕ್ಬರ್ ಖಾನ್ ಸಂಗೀತದ ಮೋಡಿ ಮಾಡಿದರು. ಅದು ನನ್ನ ಜೀವನದ ಅತಿ ಮುಖ್ಯ ಗಳಿಗೆ. ನನಗೆ ಅವರ ಸರೋದದ ಹುಚ್ಚು ಹಿಡಿಸಿತು’ ಎಂದಿದ್ದಾರೆ.